Russia Ukraine War: (ಮಾ.1): ರಷ್ಯಾ ಉಕ್ರೇನ್ ದಾಳಿಗೆ ಉಕ್ರೇನ್ನಲ್ಲಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಎಂಬುವರು ಮೃತಪಟ್ಟಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಈ ಬಗ್ಗೆ ತಿಳಿಸಿದ್ದು. ನವೀನ್ ಎಂಬುವವರು ಕರ್ನಾಟಕದ ಹಾವೇರಿಯವರಾಗಿದ್ದು, 4ವರ್ಷಗಳಿಂದ ಉಕ್ರೇನ್ನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ 11.30ಕ್ಕೆ ಕೊನೇ ಬಾರಿ ನವೀನ್ ಸಂಪರ್ಕಕ್ಕೆ ಸಿಕ್ಕಿದ್ದರು. ಆದರೀಗ ಅವರು ಮೃತಪಟ್ಟಿರುವುದು ವಿಷಾದನಿಯವಾಗಿದೆ.
With profound sorrow we confirm that an Indian student lost his life in shelling in Kharkiv this morning. The Ministry is in touch with his family.
— Arindam Bagchi (@MEAIndia) March 1, 2022
We convey our deepest condolences to the family.
ನವೀನ್ ಎಂಬುವವರು, ಕಾರ್ಖೀವ್ನ ಕಾಲಮಾನದ ಪ್ರಕಾರ ಮುಂಜಾನೆ 7ಗಂಟೆ ಹೊತ್ತಿಗೆ ಉಪಹಾರಕ್ಕಾಗಿ ಹಲವರ ಜತೆ ತಿಂಡಿ ಪಡೆಯಲು ಹೊರಗೆ ನಿಂತಿದ್ದರು. ಈ ವೇಳೆ ಸುಮಾರು 8 ಗಂಟೆಯ ಹೊತ್ತಿಗೆ ರಷ್ಯಾ ಸೇನೆ ಕಾರ್ಖೀವ್ನ ಗವರ್ನರ್ ಹೌಸ್ ಸಮೀಪ ರಾಕೇಟ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ನವೀನ್ ಕೂಡ ಸಾವನ್ನಪ್ಪದ್ದಾರೆ.
ನವೀನ್ ಅವರ ಮೃತದೇಹವನ್ನು ಕಾರ್ಖೀವ್ನ ಶವಾಗಾರದಲ್ಲಿ ಇರಿಸಲಾಗಿದೆ. ನವೀನ್ ಕುಟುಂಬದವರಿಗೂ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ತಿಳಿಸಿದೆ.