ಹರಿದ್ವಾರ: (ಜ.12) Hate Speech : ಧರ್ಮ ಸಂಸತ್ ಹೆಸರಿನಲ್ಲಿ ನಡೆದ ದ್ವೇಷ ಭಾಷಣದ ಕುರಿತು ತನಿಖೆ ನಡೆಸುವಂತೆ ಸಲ್ಲಿಸಿದ್ದ ಮನವಿಗೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿದ್ದು ಉತ್ತರಕಾಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದರಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ಭಾಷಣದ ಕುರಿತು ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಸಲ್ಲಿಸಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ ವಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹೀಮಾ ಕೊಹ್ಲಿ ಅವರಿಂದ ಪೀಠದೆದುರು ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು, ಹರಿದ್ವಾರದ ಧರ್ಮ ಸಂಸದ ರೀತಿಯ ಕಾರ್ಯಕ್ರಮಗಳಲ್ಲಿ ಮಾಡುವ ಭಾಷಣಗಳು ದೇಶದ ವಾತಾವರಣವನ್ನು ಹಾಳುಮಾಡುತ್ತಿದೆ ಹಾಗೂ ಪ್ರಜಾಪ್ರಭುತ್ವದ ಸ್ವರೂಪವನ್ನು ನಾಶಪಡಿಸುತ್ತಿದೆ ಎಂದು ವಾದಿಸಿದರು.

ನಿನಗೆ ಮಧ್ಯಪ್ರವೇಶ ಕಾರ್ಯದಲ್ಲಿ ಒಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಗುಂಪು ಹತ್ಯೆಗೆ ಸಂಬಂಧಿಸಿದಂತೆ ತೆಹಸೀನ್ ಪೂನವಾಲ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿದರು.
ನಡುವೆ ನ್ಯಾಯಮೂರ್ತಿಯವರು ಪ್ರತಿಕ್ರಿಯಿಸಿ ಸಂಬಂಧಿಸಿದ ಮತ್ತೊಂದು ಪ್ರಕರಣ ಬಾಕಿ ಉಳಿದಿದೆ ಆದರೆ ಅವುಗಳ ಜೊತೆ ಪ್ರಕರಣವನ್ನು ಸೇರಿಸಿ ವಿಧಿಸಬಾರದೆಂದು ಸಿಬಲ್ ಮನವಿ ಮಾಡಿದರು. ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ, ಉನಾ, ದಾಸ್ನಾ ಕುರುಕ್ಷೇತ್ರದಲ್ಲಿ ಧರ್ಮ ಸಂಸತ್ತು ಗಳನ್ನು ಬಳಸಲಾಗುತ್ತದೆ ಇಂತಹ ಘಟನೆಗಳು ಇಡೀ ದೇಶದ ವಾತಾವರಣ ಹಾಳುಮಾಡುತ್ತದೆ. ಇದು ಪ್ರಜಾಪ್ರಭುತ್ವದ ಸ್ವರೂಪ ನಾಶಪಡಿಸುತ್ತದೆ ಎಂದು ಹೇಳಿದರು.
ನ್ಯಾಯಾಲಯದ ತೀರ್ಪುಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆಯೆಂದು ವಕೀಲರು ಹೇಳುತ್ತಿದ್ದಾರೆ. ನೋಟಿಸ್ ನೀಡಲಾಗುವುದು ಹಾಗೂ ಹತ್ತು ದಿನಗಳ ನಂತರ ಪ್ರಕರಣವನ್ನು ಪಟ್ಟಿ ಮಾಡಲಾಗುತ್ತಿದ್ದು ಪ್ರಕರಣಗಳಿಗೂ ಉದ್ದಕ್ಕೂ ಸಂಬಂಧವಿದೆಯೆಂದು ನೋಡಿ ನಂತರ ಪ್ರಕರಣವನ್ನು ಅವುಗಳೊಂದಿಗೆ ಸೇರಿಸುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದೆ.