ಬೆಂಗಳೂರು: (ಡಿ.22) Earthquake: ಬೆಂಗಳೂರು ಜಿಲ್ಲೆಯ ಸುತ್ತಮುತ್ತ ಇಂದು ಭೂಮಿ ಕಂಪಿಸಿದ ಅನುಭವ ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3.3 ಹಾಗೂ 3.1 ರಷ್ಟು ಎರಡು ಬಾರಿ ತೀವ್ರತೆ ಭೂಕಂಪನ ಸಂಭವಿಸಿದೆ ಎಂದು ನ್ಯಾಶಿನಲ್ ಸೆಂಟರ್ ಫಾರ್ ಸೀಸ್ಮೋಲಜಿ ವರದಿ ಮಾಡಿದೆ.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ ಇದರಿಂದ ಗ್ರಾಮದ ಜನರು ಭಯಭೀತರಾಗಿ ಹೊರಬಂದಿದ್ದಾರೆ
ತಾಲೂಕಿನ ಬಿಸೇಗಾರ ಹಳ್ಳಿ, ಶೆಟ್ಟಿಗೆರೆ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗ್ಗೆ 7:00 ಯಲ್ಲಿ ಭೂಮಿ ಕಂಪಿಸಿದ್ದು ಚಿಂತಾಮಣಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇದೇ ರೀತಿಯ ಅನುಭವ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್ ನಲ್ಲಿ ಬೆಂಗಳೂರಿಂದ ಸುಮಾರು 66 ಕಿಲೋಮೀಟರ್ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಭೂಕಂಪನ ಸಂಭವಿಸಿದೆಯೆಂದು ಮಾಡಿದೆ. ಇದರ ತೀವ್ರತೆ 3.3 ರಷ್ಟು ಇದೆ ಹಾಗೂ 3.1ರಷ್ಟು ಇದೆ ಎಂದು ವರದಿ ಮಾಡಿದೆ.
Earthquake of Magnitude:3.3, Occurred on 22-12-2021, 07:14:32 IST, Lat: 13.55 & Long: 77.76, Depth: 23 Km ,Location: 66km NNE of Bengaluru, Karnataka, India for more information download the BhooKamp App https://t.co/iax6vbE3wO pic.twitter.com/irvoaQmaMF
— National Center for Seismology (@NCS_Earthquake) December 22, 2021