ಬೆಂಗಳೂರು:(ಡಿ 2) PRAN:ಬೆಂಗಳೂರು: ರಾಷ್ಟ್ರೀಯ ಪಿಂಚಣೆ ಯೋಜನೆಗೆ (Pension) ಒಳಪಡುವಂತ ಸರ್ಕಾರಿ ನೌಕರರು, ಅಧಿಕಾರಿಗಳು ನಿವೃತ್ತಿ, ಮರಣ, ರಾಜೀನಾಮೆಯಂತ ಸಂದರ್ಭದಲ್ಲಿ ತಮ್ಮ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಅನುಮತಿಸಿದೆ.
ಅಲ್ಲದೇ ಈ ಹಿಂದಿನ ಪ್ರಾನ್ ಖಾತೆಯ ಹಣ ಹಿಂಪಡೆಯುವ ಮಿತಿಯನ್ನು ಮಾರ್ಪಡಿಸಿದೆ. ಈ ಮೂಲಕ ರಾಜ್ಯದ ಸರ್ಕಾರಿ ನೌಕರರಿಗೆ ( Karnataka Government Employees ), ಅವರ ಕುಟುಂಬಸ್ಥರಿಗೆ ಗುಡ್ ನ್ಯೂಸ್ ನೀಡಿದೆ.
ಮಿತಿ ಹೆಚ್ಚಳ
ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕುಮಟಾ ಪ್ರಕಾಶ್ ನಡವಳಿ ಹೊರಡಿಸಿದ್ದು, ರಾಜ್ಯ ಸರ್ಕಾರವು ದಿನಾಂಕ 18-05-2016ರಲ್ಲಿರುವಂತ ಗರಿಷ್ಠ ಪ್ರಾನ್ (PRAN) ಹಿಂಪಡೆಯುವ ಮಿತಿಯನ್ನು ಹೆಚ್ಚಿಸಲಾಗಿದೆ. ಆ ಮಾರ್ಪಡಿಸಿದ ಮಿತಿ ಈ ಕೆಳಗಿನಂತಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ನಿವೃತ್ತಿಯ ನಂತರ 2 ಲಕ್ಷದವರೆಗೆ ಮಾತ್ರ ಎನ್ ಪಿಎಸ್ ಕಾರ್ಪಸ್ (NPS CARPUS) ಹಣವನ್ನು ಹಿಂಪಡೆಯಲು ಅವಕಾಶವಿತ್ತು. ಈ ಮಿತಿಯನ್ನು 5 ಲಕ್ಷದವರೆಗೆ ಹೆಚ್ಚಿಸಿದೆ.
ಇದಲ್ಲದೇ ಮರಣ ಹೊಂದಿದಂತ ಸಂದರ್ಭದಲ್ಲಿ ನೌಕರರ ನಾಮನಿರ್ದೇಶಿತರಿಗೆ ಪ್ರಾನ್ ಖಾತೆಯಲ್ಲಿನ ಮೊತ್ತ 2 ಲಕ್ಷ ಹಿಂಪಡೆಯಲು ಅವಕಾಶ ಇದ್ದದ್ದನ್ನು 5 ಲಕ್ಷಕ್ಕೆ ಹೆಚ್ಚಿಸಿದೆ.
ಇದಲ್ಲದೇ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವಂತ ಸರ್ಕಾರಿ ಅಧಿಕಾರಿ, ನೌಕರರು ರಾಜೀನಾಮೆ ನೀಡಿದಂತ ಸಂದರ್ಭದಲ್ಲಿ ಪ್ರಾನ್ ಖಾತೆಯಲ್ಲಿನ ಹಣ ಹಿಂಪಡೆಯುವ ಮೊತ್ತವನ್ನು 1 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.