Congress Party: ಬೆಂಗಳೂರು: (ನ.23) ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಂದ ಪಟ್ಟಿ ಪ್ರಕಟ ಮಾಡಲಾಗಿದೆ. ಬಿಜೆಪಿ ನಾಯಕ ಮಂಜು ಪುತ್ರನಿಗೆ ಕೊಡಗು ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಮಂತರ್ ಗೌಡ ಕೊಡಗು ಅವರಿಗೆ ಕಾಂಗ್ರೆಸ್ ಎಂಎಲ್ಸಿ ಟಿಕೆಟ್ ನೀಡಲಾಗಿದೆ. ತುಮಕೂರಿನ ರಾಜೇಂದ್ರ ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದ್ದು. ಬಳ್ಳಾರಿಯಿಂದ ಮಲ್ಲಿಕಾರ್ಜುನ ಖರ್ಗೆ ಬೆಂಬಲರಾಗಿರುವ ಕೆಸಿ ಕೊಂಡಯ್ಯ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯಕರ್ತರಗಿರುವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ಸಿನ ಸಂಖ್ಯೆ ಈ ಬಾರಿ ಹೆಚ್ಚಾಗಲಿದೆ ಹಾಗೂ ಕಾಂಗ್ರೆಸ್ ಪಕ್ಷದ ಹೊರಗಿನವರಿಗೆ ಟಿಕೆಟ್ ನೀಡಿಕೆ ವಿಚಾರವಾಗಿ ಪ್ರಕಟಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸ್ಥಳೀಯ ನಾಯಕರು ಹೇಳಿದಂತೆ ನಾವು ಕೇಳಬೇಕು ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನಾವು ನೋಡಿದ್ದೇವೆ ಹಾಗಾಗಿ ಇದು ಅನಿವಾರ್ಯ ಎಂದು ಹೇಳಿದ್ದಾರೆ..
ಎಸ್ ಆರ್ ಪಾಟೀಲರನ್ನು ಪಕ್ಷದಿಂದ ಕೈಬಿಡುವುದಿಲ್ಲ, ಪಾಟೀಲರಿಗೆ ಸೂಕ್ತಸ್ಥಾನಮಾನ ನೀಡುತ್ತೇವೆ ಎಂದು ಹೇಳಿದ್ದಾರ. ಪ್ರತಿ ಚುನಾವಣೆಯಲ್ಲಿ ಪಕ್ಷದ ವಿರೋಧ ವ್ಯಕ್ತವಾಗುವುದು ಸಾಮಾನ್ಯ ನನ್ನ ಮತದಾರರು ಜನಪ್ರತಿನಿಧಿಗಳು ಅವರ ಜೊತೆ ಚರ್ಚಿಸಿ ಮಾಡುತ್ತೇವೆ ನನ್ನ ವಿರೋಧ ಮಾಡಿದ ಶಾಸಕರು ಮಾತನಾಡಬೇಕೆಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಕೆಸಿ ಕೊಂಡಯ್ಯ ಅವರು ಹೇಳಿದರು.
ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
ಕಲಬುರ್ಗಿ :ಶಿವಾನಂದ ಪಾಟೀಲ್ ಮರ್ತೂರು
ಬೆಳಗಾವಿ: ಚೆನ್ನರಾಜ ಹಟ್ಟಿಹೊಳಿ
ಧಾರವಾಡ: ಸಲೀಂ ಅಹ್ಮದ್
ಉತ್ತರಕನ್ನಡ: ಭೀಮಣ್ಣ ನಾಯ್ಕ್
ಕೊಪ್ಪಳ ರಾಯಚೂರು: ಶರಣಗೌಡ ಪಾಟೀಲ್
ಚಿತ್ರದುರ್ಗ- ಬಿ. ಸೋಮಶೇಖರ್
ಶಿವಮೊಗ್ಗ- ಪ್ರಸನ್ನ ಕುಮಾರ್
ದಕ್ಷಿಣಕನ್ನಡ- ಉಡುಪಿ (ದ್ವಿಸದಸ್ಯ ಸ್ಥಾನ)- ಮಂಜುನಾಥ ಭಂಡಾರಿ
ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ
ಹಾಸನ- ಎಂ. ಶಂಕರ್
ತುಮಕೂರು- ಆರ್. ರಾಜೇಂದ್ರ
ಮಂಡ್ಯ- ದಿನೇಶ್ ಗೂಳಿಗೌಡ
ಬೆಂಗಳೂರು ಗ್ರಾಮಾಂತರ- ಎಸ್. ರವಿ
ಕೊಡಗು- ಮಂಥರ್ ಗೌಡ
ವಿಜಯಪುರ- ಬಾಗಲಕೋಟೆ (ದ್ವಿಸದಸ್ಯ ಸ್ಥಾನ)- ಸುನಿಲ್ಗೌಡ
ಮೈಸೂರು- ಚಾಮರಾಜನಗರ (ದ್ವಿಸದಸ್ಯ ಸ್ಥಾನ)- ತಿಮ್ಮಯ್ಯ
ಬಳ್ಳಾರಿ- ಕೆ.ಸಿ. ಕೊಂಡಯ್ಯ
ಬೀದರ್- ಭೀಮರಾವ್ ಬಿ. ಪಾಟೀಲ್
ಕೋಲಾರ- ಎಂ.ಎಲ್. ಅನಿಲ್ ಕುಮಾರ್
ಬೆಂಗಳೂರು ನಗರ- ಯೂಸುಫ್ ಷರೀಫ್