Secular TV
Friday, January 27, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಕನ್ನಡ ದಿನ ವಿಶೇಷ ಸರಣಿ ಲೇಖನಗಳು #01 : ಕನ್ನಡ ರಾಜ್ಯೋತ್ಸವ ಪರಿಕಲ್ಪನೆಯ ಕನಸು ಕಂಡ ಮೊದಲ ವ್ಯಕ್ತಿ ಯಾರು ಗೊತ್ತೆ?

Secular TVbySecular TV
A A
Reading Time: 2 mins read
ಕನ್ನಡ ದಿನ ವಿಶೇಷ ಸರಣಿ ಲೇಖನಗಳು #01  : ಕನ್ನಡ ರಾಜ್ಯೋತ್ಸವ ಪರಿಕಲ್ಪನೆಯ ಕನಸು ಕಂಡ ಮೊದಲ ವ್ಯಕ್ತಿ ಯಾರು ಗೊತ್ತೆ?
0
SHARES
Share to WhatsappShare on FacebookShare on Twitter

ಬೆಂಗಳೂರು : ಸಮಸ್ತ ಓದುಗರಿಗೂ ಹಾಗೂ ನಮ್ಮೆಲ್ಲ ಹಿತೈಷಿಗಳಿಗೂ ಕನ್ನಡ ರಾಜ್ಯೋತ್ಸವದ (Kannada Rajyotsava) ಹಾರ್ಧಿಕ ಶುಭಾಶಯಗಳು. ಆತ್ಮಿಯರೇ ನವೆಂಬರ್‌ 01 (November 01) ಅಂದ ತಕ್ಷಣ ನೆನಪಾಗುವುದು ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವ.

ಸಮಸ್ತ ಓದುಗರಿಗೂ ಹಾಗೂ ನಮ್ಮೆಲ್ಲ ಹಿತೈಷಿಗಳಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.

ಕರ್ನಾಟಕ (Karnataka) ರಾಜ್ಯ ಮಾತ್ರವಲ್ಲದೇ, ದೇಶದೆಲ್ಲೆಡೆ ಹಾಗೂ ವಿಶ್ವದ ನಾನಾ ಕಡೆ ತಮ್ಮ ನೆಲೆ ಕಂಡುಕೊಂಡಿರುವ ಪ್ರತಿಯೊಬ್ಬ ಕನ್ನಡಿಗನೂ ಸಂಭ್ರಮಿಸುವಂತಹ ದಿನ. ಇಂತಹ ಈ ದಿನದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ಮತ್ತು ಕನ್ನಡದ ಮೇಲೆ ಅಭಿಮಾನ ಹೊಂದಿದವನು ತಿಳಿದುಕೊಳ್ಳಲೇಬೇಕಾದ ಅನೇಕ ವಿಷಯಗಳನ್ನು ಇವತ್ತಿನ ಈ ವಿಶೇಷ ಸರಣಿ ಲೇಖನ (A Series of Articles) ಗಳಲ್ಲಿ ತಿಳಿಸುತ್ತೇವೆ ಬನ್ನಿ.

ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಸಾಂಧರ್ಬಿಕ ಚಿತ್ರ

ಕರ್ನಾಟಕ ರಾಜ್ಯೋತ್ಸವವನ್ನು – ಕನ್ನಡ ದಿನ (Kannada Day) , ಕರ್ನಾಟಕ ರಚನಾ ದಿನ (Karnataka Formation Day) ಅಥವಾ ಕನ್ನಡ ರಾಜ್ಯೋತ್ಸವ ಎಂತಲೂ ಕರೆಯುತ್ತಾರೆ. ಸರಿಯಾಗಿ 65 ವರ್ಷಗಳ ಹಿಂದೆ ಅಂದರೆ 1956 ರಲ್ಲಿ ದಕ್ಷಿಣ ಭಾರತ (South India) ದ ಕನ್ನಡ ಮಾತನಾಡುವ ಜನರಿರುವ ಎಲ್ಲ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ಏಕೀಕರಣ (United) ಗೊಳಿಸಿ ಮೈಸೂರು (Mysuru) ಎಂಬ ಹೊಸ ರಾಜ್ಯ ಉದಯವಾದ ದಿನ. ಮೊದಲಿಗೆ ಮೈಸೂರು ರಾಜ್ಯವನ್ನು ಮೂರು ಭಾಗಗಳಾಗಿ ಗುರುತಿಸಿದ್ದರು.

ಇದನ್ನೂ ಓದಿ : ದೀಪದಿಂದ ದೀಪ ಹಚ್ಚುವ ಹಬ್ಬ ಬಂದೇ ಬಿಡ್ತು – ನವೆಂಬರ್ 4 ದೇಶದಾದ್ಯಂತ ದೀಪಾವಳಿ

ಹಳೆಯ ಮೈಸೂರು ಭಾಗ, ಉತ್ತರ ಕರ್ನಾಟಕ ಭಾಗ ಮತ್ತು ಮಲೆನಾಡು. ತದ ನಂತರ ಅಖಂಡ ರಾಜ್ಯದ ಪ್ರತಿಯೊಂದು ಪ್ರದೇಶಗಳ ಮಹತ್ವಕ್ಕಾಗಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದಲೂ ಇಲ್ಲಿವರೆಗೂ ನಮ್ಮ ರಾಜ್ಯವನ್ನು ಕರ್ನಾಟಕ ಎಂದು ಮತ್ತು ಇಲ್ಲಿ ವಾಸಿಸುವ ಜನರನ್ನು ಕನ್ನಡಿಗರೆಂದು ಕರೆಯುತ್ತಾರೆ.

ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಸಾಂಧರ್ಬಿಕ ಚಿತ್ರ

ಈ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜೆ (Government Holiday) ಎಂದು ಪಟ್ಟಿ ಮಾಡಲಾಗಿದೆ. ಈ ದಿನವನ್ನು ಭವ್ಯವಾದ ಹಬ್ಬದಂತೆ ಮತ್ತು ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಮೊಟ್ಟ ಮೊದಲ ಬಾರಿ ಸಮಗ್ರ ಕರ್ನಾಟಕ ಏಕೀಕರಣದ ಕನಸನ್ನು ಕಂಡಿದ್ದು ಶ್ರೀಯುತ ಆಲೂರು ವೆಂಕಟ ರಾವ್ ಅವರು (Shri Aluru Venkata Rao) .

ಶ್ರಿಯುತ ಆಲೂರು ವೆಂಕಟರಾವ್‌ರವರು

1905ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದಾಗಿ ಕನ್ನಡ ಕುಲಪುರೋಹಿತರು ಎಂದು ಗೌರವಾನ್ವಿತ ಸ್ಥಾನ ಪಡೆದವರಾಗಿದ್ದಾರೆ.

ಇದನ್ನೂ ಓದಿ : The Visa Lord – Hyderabad : ವಿದೇಶಕ್ಕೆ ಹೋಗಬೇಕೆ ? ಹಾಗಾದರೆ ವೀಸಾ ದೇವರ ದರ್ಶನ ಮಾಡಿ

ಆಲೂರು ವೆಂಕಟರಾಯರು ಆ ಕಾಲದ ಸಾಮಾಜಿಕ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. 1921 ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಟ ಸಾಹಿತ್ಯ ಪರಿಷತ್‌ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ (ಧಾರವಾಡ), ಈ ಎಲ್ಲಾ ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ : ಪುನೀತ್ ರಾಜ್‍ಕುಮಾರ್ ಬೆಳೆದು ಬಂದಿದ್ದೇಗೆ? – ಅವರು ಉಚಿತ ಜಾಹೀರಾತು ಮಾಡ್ತಿದ್ಯಾಕೆ.? ಇಲ್ಲಿದೆ ನೋಡಿ ಅಪ್ಪು ಬಗೆಗಿನ ಇಂಟ್ರಸ್ಟಿಂಗ್ ಸಂಗತಿಗಳು

1907ರಲ್ಲಿಯೆ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕಾಶಕರಿಗೆ ಅನುಕೂಲವಾಗಲು ಕರ್ನಾಟಕ ಗ್ರಂಥ ಮಂಡಳಿಯನ್ನು ಸ್ಥಾಪಿಸಿದ್ದರು.

ಮುಂದಿನ ಲೇಖನಗಳಲ್ಲಿ ಮತ್ತಷ್ಟು ಕನ್ನಡ ರಾಜ್ಯೋತ್ಸವ ಕುರಿತಂತೆ ವಿಷಯಗಳನ್ನು ತಿಳಿದುಕೋಳ್ಳೊಣ

RECOMMENDED

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು : ದಿವ್ಯಾ ಎಸ್ ಹೊಸೂರ್
Bangalore

ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು : ದಿವ್ಯಾ ಎಸ್ ಹೊಸೂರ್

January 26, 2023
Darshan Thogudeepa: ದರ್ಶನ್ ಮೇಲೆ ಶೂ ಎಸೆದ್ರು ನುಗುತ್ತಲೇ ‘ತಪ್ಪೇನು ಇಲ್ಲ ಚಿನ್ನ..ಪರವಾಗಿಲ್ಲ ಬಿಡ್ರೊ’ ಎಂದ ಯಜಮಾನ..! : ದಾಸನ ಮಾತಿಗೆ ತಲೆಬಾಗಿದ ಫ್ಯಾನ್ಸ್..!
Entertainment

Darshan Thogudeepa: ದರ್ಶನ್ ಮೇಲೆ ಶೂ ಎಸೆದ್ರು ನುಗುತ್ತಲೇ ‘ತಪ್ಪೇನು ಇಲ್ಲ ಚಿನ್ನ..ಪರವಾಗಿಲ್ಲ ಬಿಡ್ರೊ’ ಎಂದ ಯಜಮಾನ..! : ದಾಸನ ಮಾತಿಗೆ ತಲೆಬಾಗಿದ ಫ್ಯಾನ್ಸ್..!

December 19, 2022
Just Pass Cinema: ಸೆಟ್ಟೇರಿದ ಶ್ರೀ ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ
Entertainment

Just Pass Cinema: ಸೆಟ್ಟೇರಿದ ಶ್ರೀ ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ

December 15, 2022
BJP Government: ವರ್ಗಾವಣೆಯಲ್ಲಿ ಬಿಜೆಪಿ ಕುತಂತ್ರ: ಚುನಾವಣಾ ಆಯೋಗದ ಮೊರೆ ಹೋದ ಎಎಪಿ
Uncategorized

BJP Government: ವರ್ಗಾವಣೆಯಲ್ಲಿ ಬಿಜೆಪಿ ಕುತಂತ್ರ: ಚುನಾವಣಾ ಆಯೋಗದ ಮೊರೆ ಹೋದ ಎಎಪಿ

December 14, 2022
Next Post
ಕನ್ನಡ ದಿನ ವಿಶೇಷ ಸರಣಿ ಲೇಖನಗಳು #02 : ಕನ್ನಡ ಎಂದೊಡನೆ ಕಣ್ಣ ಮುಂದೆ ಬರುವುದು ಕನ್ನಡದ ಬಾವುಟ – ಏನಿದರ ವಿಶೇಷ?

ಕನ್ನಡ ದಿನ ವಿಶೇಷ ಸರಣಿ ಲೇಖನಗಳು #02 : ಕನ್ನಡ ಎಂದೊಡನೆ ಕಣ್ಣ ಮುಂದೆ ಬರುವುದು ಕನ್ನಡದ ಬಾವುಟ - ಏನಿದರ ವಿಶೇಷ?

ಕನ್ನಡ ಭಾಷೆ ಬಗ್ಗೆ ಹೇಳುತ್ತ ಹೋದರೆ ಬರೆಯುವುದನ್ನು ಮುಗಿಸಲು ಸಾಧ್ಯವೇ ಇಲ್ಲ

ಕನ್ನಡ ಭಾಷೆ ಬಗ್ಗೆ ಹೇಳುತ್ತ ಹೋದರೆ ಬರೆಯುವುದನ್ನು ಮುಗಿಸಲು ಸಾಧ್ಯವೇ ಇಲ್ಲ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist