Secular TV
Monday, February 6, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Hairfall Remedy : ಕೂದಲುದುರುವಿಕೆಯಿಂದ ಹೈರಾಣಾಗಿದ್ದಿರಿಯೇ? ಇಲ್ಲಿದೆ ನೋಡಿ ಈರುಳ್ಳಿ ಫಾರ್ಮುಲಾ

Secular TVbySecular TV
A A
Reading Time: 2 mins read
Hairfall Remedy : ಕೂದಲುದುರುವಿಕೆಯಿಂದ ಹೈರಾಣಾಗಿದ್ದಿರಿಯೇ? ಇಲ್ಲಿದೆ ನೋಡಿ ಈರುಳ್ಳಿ ಫಾರ್ಮುಲಾ
0
SHARES
Share to WhatsappShare on FacebookShare on Twitter

ಪ್ರತಿಯೊಬ್ಬರೂ ಸುಂದರವಾದ, ಸದೃಢ ತಲೆಗೂದಲನ್ನು ಬಯಸುತ್ತಾರೆ. ಪುರುಷರಾಗಲೀ, ಮಹಿಳೆಯರಾಗಲಿ ಸುಂದರವಾಗಿ ಕಾಣಲು ತಲೆಗೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆಧುನಿಕ ಜೀವನಶೈಲಿ, ಒತ್ತಡದ ಬದುಕಿನಿಂದ 25-30 ರ ವಯಸ್ಸಿನಲ್ಲಿಯೇ ಪುರುಷರು ತಲೆ ಕೂದಲು ಉದುರುವ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರೂ ಮಾಲಿನ್ಯ, ಒತ್ತಡದ ಬದುಕಿನಿಂದ ತಲೆ ಕೂದಲು ಉದುರುವ ಸಮಸ್ಯೆಗೆ ಒಳಗಾಗುತ್ತಾರೆ.

ಆದರೆ ಅಡುಗೆಗೆ ಬಳಕೆಯಾಗುವ, ಸಾಮಾನ್ಯವಾಗಿ ಬಾಯಿಯ ವಾಸನೆಗೆ ಕಾರಣವಾಗುತ್ತದೆ ಎಂದು ಎಲ್ಲರೂ ದೂರ ಇಡಲು ಬಯಸುವ ಈರುಳ್ಳಿ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಒದಗಿಸಬಲ್ಲದು. ಇದು ಕೂದಲ ಬುಡವನ್ನು ಗಟ್ಟಿ ಮಾಡುವ ಜೊತೆಗೆ ಈಗಾಗಲೇ ಕೂದಲು ಉದುರಿ ಹೋಗಿ ಬಕ್ಕ ಉಂಟಾದ ಜಾಗದಲ್ಲಿ ಮತ್ತೆ ಕೂದಲು ಚಿಗುರುವಂತೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ವಿಚಾರ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವ ಹಲವರ ಮೊಗದಲ್ಲಿ ಸಂತಸವನ್ನು ಉಂಟು ಮಾಡದೆ ಇರದು.

ಈರುಳ್ಳಿಯ ವಿಶೇಷತೆ – ಆಂಟಿ ಆಕ್ಸಿಡೆಂಟ್ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಗಂಧಕದ ಅಂಶ ಹೊಂದಿರುವ ಈರುಳ್ಳಿ ತಲೆ ಕೂದಲ ಸಮಸ್ಯೆಗೆ ಮಾತ್ರ ರಾಮಬಾಣವಲ್ಲ. ಇದು ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುವ, ರಕ್ತದೊತ್ತಡ ತಗ್ಗಿಸುವ ಕೆಲಸವನ್ನೂ ಮಾಡುತ್ತದೆ. 100 ಗ್ರಾಂ ಈರುಳ್ಳಿಯಲ್ಲಿ 40 ಕ್ಯಾಲೋರಿ ಮಾತ್ರ ಇರುತ್ತದೆ. ಇದರಲ್ಲಿ ಶೇ. 85 ರಷ್ಟು ನೀರು, 1.1 ಗ್ರಾಂ ಪ್ರೋಟೀನ್, 9.3 ಗ್ರಾಂ ಕಾರ್ಬೋಹೈಡ್ರೇಟ್, 4.2 ಗ್ರಾಂ ಸಕ್ಕರೆ, 1.7 ಗ್ರಾಂ ನಷ್ಟು ನಾರು ಪದಾರ್ಥ, 0.1 ಗ್ರಾಂ ನಷ್ಟು ಕೊಬ್ಬಿನ ಅಂಶ ಇರುತ್ತದೆ.

ಇದರ ಜೊತೆಗೆ ಚರ್ಮ ಮತ್ತು ಕೂದಲನ್ನು ನಿರ್ವಹಣೆ ಮಾಡಲು ಸಹಾಯಕವಾಗುವ ವಿಟಮಿನ್ ಸಿ ಇದರಲ್ಲಿ ಹೇರಳವಾಗಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿಯ ಬಳಕೆ ತಲೆ ಕೂದಲ ಅರೋಗ್ಯ ವೃದ್ಧಿಗೆ ಸಹಾಯಕವಾಗಿದೆ. ಇದಲ್ಲದೆ ಕೆಂಪು ರಕ್ತ ಕಣಗಳ ಸೃಷ್ಟಿಗೆ ಕಾರಣವಾಗುವ ವಿಟಮಿನ್ ಬಿ6, ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುವ ಬಿ9, ಹೃದಯದ ಅರೋಗ್ಯ, ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುವ ಪೊಟಾಶಿಯಂನ್ನು ಇದು ಒಳಗೊಂಡಿದೆ.

ತಲೆಕೂದಲ ವೃದ್ಧಿಗೆ ಬಳಕೆ ಹೇಗೆ ? – ಹಸಿಯಾಗಿ ಈರುಳ್ಳಿಯನ್ನು ತಲೆ ಕೂದಲಿಗೆ ಹಚ್ಚಬಹುದು. ಇಲ್ಲವೇ ಈರುಳ್ಳಿಯನ್ನು ಕೊಬ್ಬರಿ ಎಣ್ಣೆಯ ಜೊತೆಗೆ ಕಾಯಿಸಿ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚಬಹುದಾಗಿದೆ. ಮೊದಲ ವಿಧಾನದಲ್ಲಿ ಈರುಳ್ಳಿಯ ಸಿಪ್ಪೆ ತೆಗೆದು ಸ್ವಲ್ಪ ಭಾಗವನ್ನು ಚೆನ್ನಾಗಿ ಜಜ್ಜಬೇಕು. ಈ ರಸಕ್ಕೆ ಕೊಬ್ಬರಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ತಲೆಗೆ ಹಚ್ಚಿ ಮಸಾಜ್ ಮಾಡಬೇಕು. ಅರ್ಧ ಗಂಟೆ ಬಿಟ್ಟು ತಲೆಯನ್ನು ಸೀಗೆ ಹುಡಿಯಲ್ಲಿ ಚೆನ್ನಾಗಿ ತೊಳೆಯಬೇಕು. ಈ ರೀತಿ ದಿನ ಅಥವಾ ಎರಡು ದಿನಕ್ಕೊಮ್ಮೆ ತಲೆಗೆ ಈರುಳ್ಳಿ ರಸವನ್ನು ಹಚ್ಚಬಹುದು. ಪ್ರತೀ ಬಾರಿ ಈರುಳ್ಳಿ ರಸವನ್ನು ಹೊಸದಾಗಿ ತಯಾರಿಸಿ ಬಳಕೆ ಮಾಡುವುದು ಬಹಳ ಮುಖ್ಯ.

ಎರಡನೇ ವಿಧಾನದಲ್ಲಿ ಈರುಳ್ಳಿಯನ್ನು ಕತ್ತರಿಸಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಬೇಕು. ಎಣ್ಣೆ ಚೆನ್ನಾಗಿ ಕುದಿದ ಬಳಿಕ ಈರುಳ್ಳಿಯನ್ನು ಎಣ್ಣೆಗೆ ಹಾಕಿ ಅದು ರಸ ಬಿಡುವವರೆಗೆ ಕಾಯಿಸಬೇಕು. ಬಳಿಕ ಈರುಳ್ಳಿಯನ್ನು ಹಿಂಡಿ ಬೇರ್ಪಡಿಸಬೇಕು. ಹೀಗೆ ತಯಾರಾದ ಈರುಳ್ಳಿ ಎಣ್ಣೆ ಹಳದಿ ಬಣ್ಣ ಹೊಂದಿರುತ್ತದೆ. ಇದನ್ನು ತಲೆಕೂದಲಿಗೆ ಹಾಕಿ ಚೆನ್ನಾಗಿ ಮಸಾಜ್ ಮಾಡಬೇಕು. ಅರ್ಧ ಗಂಟೆಯ ಬಳಿಕ ತಲೆಕೂದಲನ್ನು ಚೆನ್ನಾಗಿ ತೊಳೆಯಬೇಕು. ಈರುಳ್ಳಿ ರಸವನ್ನು ತಲೆಗೆ ಹಾಕಿದಾಗ ಕಣ್ಣು ಸ್ವಲ್ಪ ಉರಿದ ಅನುಭವ ಆಗಬಹುದು.

ಈ ರೀತಿ ಈರುಳ್ಳಿ ರಸ ಹಾಕಿದ ಎರಡು-ಮೂರು ವಾರಗಳಲ್ಲಿ ಕೂದಲು ಇಲ್ಲದ ಜಾಗದಲ್ಲಿ ರಂಧ್ರಗಳು ಉಂಟಾಗಿ ಹೊಸ ಕೂದಲು ಬೆಳೆಯುವುದು ಕಂಡು ಬರುತ್ತದೆ. ತಲೆಕೂದಲು ತುಂಬಾ ಉದುರಿದ್ದರೆ ಪೂರ್ಣ ಪ್ರಮಾಣದಲ್ಲಿ ಮತ್ತೆ ಕೂದಲು ಬೆಳೆಯಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಈರುಳ್ಳಿ ರಸ ಹಚ್ಚುತ್ತಾ ಹೋದಂತೆ ಕೂದಲ ಬುಡ ಗಟ್ಟಿಯಾಗುವ ಜೊತೆಗೆ ಕೂದಲ ಅರೋಗ್ಯದಲ್ಲೂ ವೃದ್ಧಿ ಕಂಡು ಬರುತ್ತದೆ.

ತಲೆಕೂದಲ ಆರೋಗ್ಯದ ದೃಷ್ಟಿಯಿಂದ ಈರುಳ್ಳಿಯನ್ನು ಬಳಕೆ ಮಾಡುವ ಜೊತೆಗೆ ರಸಾಯನಿಕ ಶ್ಯಾಂಪೂಗಳ ಬಳಕೆಯನ್ನು ಬಿಡಬೇಕು. ತಲೆಕೂದಲಿನ ಅರೋಗ್ಯದ ದೃಷ್ಟಿಯಿಂದ ತಣ್ಣೀರನ್ನು ಬಳಕೆ ಮಾಡುವುದು ಸೂಕ್ತಕರ. ಒಂದು ವೇಳೆ ತಣ್ಣೀರು ಬಳಸಲು ಸಾಧ್ಯವಿಲ್ಲ ಎಂದಾದರೆ ಉಗುರು ಬೆಚ್ಚಗಿನ ನೀರಿಗಿಂತ ಹೆಚ್ಚಿನ ಬಿಸಿನೀರನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಲು ಹೋಗಬಾರದು.

RECOMMENDED

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್
Entertainment

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ
Entertainment

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
Next Post
ನಟ ಪುನೀತ್‌ ರಾಜ್‌ಕುಮಾರ ಲಘು ಹೃದಯಾಘಾತ – ವಿಕ್ರಮ್‌ ಆಸ್ಪತ್ರೆಗೆ ದಾಖಲು

ನಟ ಪುನೀತ್‌ ರಾಜ್‌ಕುಮಾರ ಲಘು ಹೃದಯಾಘಾತ - ವಿಕ್ರಮ್‌ ಆಸ್ಪತ್ರೆಗೆ ದಾಖಲು

Puneeth Rajkumar : ಅಪ್ಪು ಸ್ಥಿತಿ ಚಿಂತಾಜನಕ-ಆಸ್ಪತ್ರೆಯತ್ತ ದೌಡಯಿಸಿದ ಶಿವಣ್ಣ, ಸಿಎಂ, ಯಶ್‌ ಹಾಗೂ ನಿಖಿಲ್‌-ಆಸ್ಪತ್ರೆ ಸುತ್ತ ಹೆಚ್ಚಿದ ಭದ್ರತೆ

Puneeth Rajkumar : ಅಪ್ಪು ಸ್ಥಿತಿ ಚಿಂತಾಜನಕ-ಆಸ್ಪತ್ರೆಯತ್ತ ದೌಡಯಿಸಿದ ಶಿವಣ್ಣ, ಸಿಎಂ, ಯಶ್‌ ಹಾಗೂ ನಿಖಿಲ್‌-ಆಸ್ಪತ್ರೆ ಸುತ್ತ ಹೆಚ್ಚಿದ ಭದ್ರತೆ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist