ನವದೆಹಲಿ : ಐಸಿಸಿ ಟಿ20 (ICC T20 WORLD CUP) ವಿಶ್ವಕಪ್ನಲ್ಲಿ ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವಿನ ಪಂದ್ಯ ಈಗಾಗಲೇ ಮುಗಿದಿದೆ. ಭಾನುವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ (Team India) ವನ್ನು ಪಾಕಿಸ್ತಾನ ಏಕಪಕ್ಷೀಯವಾಗಿ 10 ವಿಕೆಟ್ ಗಳಿಂದ ಸೋಲಿಸಿತು. ಇದು ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಪಡೆದ ಮೊದಲ ಮತ್ತು ಐತಿಹಾಸಿಕ ಗೆಲುವು.

ಈ ಗೆಲುವಿನೊಂದಿಗೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆಯ ವಾತಾವರಣವಿದ್ದರೆ, ಭಾರತೀಯ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ವಿಶ್ವಕಪ್ನ ಈ ದೊಡ್ಡ ಪಂದ್ಯದ ನಂತರ ಇದೀಗ ಹಲವಾರು ವಿವಾದಗಳು ಕೂಡ ಮುನ್ನೆಲೆಗೆ ಬರಲಾರಂಭಿಸಿವೆ.

ಪಾಕಿಸ್ತಾನದ ವಿಜಯದ ನಂತರ, ಭಾರತದ ರಾಜಧಾನಿ ಸೇರಿದಂತೆ ಇತರ ಕೆಲವು ಪ್ರದೇಶಗಳಲ್ಲಿ ಪಟಾಕಿ ಸಿಡಿಸಿ ಕೆಲವರು ಸಂತೋಷವನ್ನು ಆಚರಿಸಿದರು. ಅವರ ಈ ವೀಡಿಯೊಗಳು ಹೆಚ್ಚು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ (Virender Sehwag) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
Firecrackers are banned during Diwali but yesterday in parts of India there were firecrackers to celebrate Pakistan ‘s victory. Achha they must have been celebrating victory of cricket. Toh , what’s the harm in fireworks on Diwali. Hypocrisy kyun ,Saara gyaan tab hi yaad aata hai
— Virender Sehwag (@virendersehwag) October 25, 2021
ವೀರೂ ಟ್ವೀಟ್ ಮಾಡಿ, ಭಾರತದಲ್ಲಿ ದೀಪಾವಳಿಯ ದಿನ ಪಟಾಕಿ ಸುಡುವುದನ್ನು ನಿಷೇಧಿಸಲಾಗಿದೆ ಆದರೆ ನಿನ್ನೆ ಭಾರತದ ಕೆಲವು ಪ್ರದೇಶಗಳಲ್ಲಿ ಪಾಕಿಸ್ತಾನದ ಗೆಲುವಿಗೆ ಪಟಾಕಿ ಹಚ್ಚಿ ಸಂಭ್ರಮಿಸಲಾಯಿತು. ಓಹ್ ಅವರು ಅವರು ಕ್ರಿಕೆಟ್ ಆಟದ ವಿಜಯವನ್ನು ಆಚರಿಸುತ್ತಿರಬೇಕು ಎಂದು ಪ್ರಶ್ನಿಸಿರುವ ಟ್ವೀಟ್ನಲ್ಲಿ ಹೇಳಿದ್ದಾರೆ. ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರಲ್ಲಿ ಏನು ತೊಂದರೆ ಇದೆ, ಯಾಕೆ ಈ ಸೋಗು, ಹಬ್ಬದ ಸಮಯದಲ್ಲಿ ಮಾತ್ರ ಎಲ್ಲ ಜ್ಞಾನವೂ ನೆನಪಾಗುತ್ತದೆ ಎಂದು ಸೆಹ್ವಾಗ್ ಬರೆದಿದ್ದಾರೆ.

ಗಂಭೀರ್ ಕೂಡ ಛೀಮಾರಿ – ಭಾರತದ ಮಾಜಿ ಕ್ರಿಕೆಟಿಗ ಮತ್ತು ಸೆಹ್ವಾಗ್ನ ಮಾಜಿ ಸಹ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಕೂಡ ಟ್ವೀಟ್ ಮಾಡಿ ಪಾಕಿಸ್ತಾನದ ವಿಜಯವನ್ನು ಪಟಾಕಿ ಸಿಡಿಸಿ ಸಂಭ್ರಮಿಸುವ ಭಾರತೀಯರು ಇರಲು ಸಾಧ್ಯವಿಲ್ಲ, ನಾವು ನಮ್ಮ ಹುಡುಗರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿ #ಶೆಮ್ಫುಲ್ (#Shameful) ಹ್ಯಾಶ್ಟ್ಯಾಗ್ ಹಾಕಿದ್ದಾರೆ.
Those bursting crackers on Pak winning can’t be Indian! We stand by our boys! #Shameful
— Gautam Gambhir (@GautamGambhir) October 25, 2021