Secular TV
Monday, August 8, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಕೇರಳದಿಂದ ಉತ್ತರಾಖಂಡದವರೆಗೆ: ಅಕ್ಟೋಬರ್‌ನಲ್ಲಿ ರಣ ಮಳೆ ಸುರಿಯಲು ಕಾರಣವೇನು? ಇಲ್ಲಿದೆ ನೋಡಿ..

Secular TVbySecular TV
A A
Reading Time: 2 mins read
ಕೇರಳದಿಂದ ಉತ್ತರಾಖಂಡದವರೆಗೆ: ಅಕ್ಟೋಬರ್‌ನಲ್ಲಿ ರಣ ಮಳೆ ಸುರಿಯಲು ಕಾರಣವೇನು? ಇಲ್ಲಿದೆ ನೋಡಿ..
0
SHARES
Share to WhatsappShare on FacebookShare on Twitter

ಬೆಂಗಳೂರು: ಕೇರಳ ಹಾಗೂ ಉತ್ತರಾಖಂಡದಲ್ಲಿ ರಣ ಮಳೆ ಸುರಿಯುತ್ತಿದೆ. ಕರ್ನಾಟಕ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿಯೂ ಸಹ ಮಳೆಯಾರ್ಭಟ ಜೋರಾಗಿದೆ. ಕೇರಳದಲ್ಲಿ ಸರಿಸುಮಾರು 26 ಸ್ಥಳಗಳಲ್ಲಿ ಪ್ರವಾಹದ ಅಪಾಯವಿದೆ ಎಂದು ಘೋಷಿಸಲಾಗಿದೆ. ಮತ್ತೊಂದೆಡೆ ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 50ಕ್ಕೆ ಸಮೀಪಿಸುತ್ತಿದೆ. ಅಕ್ಟೋಬರ್ 18ರಿಂದ ಹೈದರಾಬಾದ್‌ನಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 1960ರಿಂದ ಇದುವರೆಗೆ ಅತಿ ಹೆಚ್ಚು ಮಳೆ ಅಕ್ಟೋಬರ್‌ ತಿಂಗಳಿನಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. 1960ರಲ್ಲಿ ಒಟ್ಟು 93.4 ಮಿಮೀ ಮಳೆ ದಾಖಲಾಗಿತ್ತು, ಇದೇ ತಿಂಗಳ 20ರಂದು 94.6 ಮಿಮೀ ಮಳೆ ದಾಖಲಾಗಿದೆ. ಸಾಮಾನ್ಯವಾಗಿ ಮುಂಗಾರು ಮಳೆ ಅಕ್ಟೋಬರ್‌ನಲ್ಲಿ ಕಡಿಮೆಯಾಗುತ್ತೆ. ಆದರೆ,ಸದ್ಯ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದಕ್ಕೆ ಕಾರಣವೇನು? ದೇಶದ ವಿವಿಧ ಭಾಗಗಳಲ್ಲಿನ ಭಾರೀ ಮಳೆಗೆ ಮೂರು ಮುಖ್ಯ ಕಾರಣಗಳಿವೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಮೊದಲನೆಯದು ಕಡಿಮೆ ಒತ್ತಡ, ಎರಡನೆಯದು ಮಾನ್ಸೂನ್ ಹಿಂಪಡೆಯುವಿಕೆಯ ವಿಳಂಬ, ಮತ್ತು ಮೂರನೆಯದು ವಾಯುವ್ಯದಿಂದ ಬೀಸುತ್ತಿರುವ ಬಲವಾದ ಗಾಳಿ. ಈ ಮೂರು ಬೆಳವಣಿಗೆಗಳು ಪ್ರತಿ ಪ್ರದೇಶದ ಮೇಲೆ ವಿಶಿಷ್ಟ ಪರಿಣಾಮವನ್ನು ಬೀರುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ಕೇರಳದಲ್ಲಿ ಮುಂಗಾರು ಆರಂಭವಾಗುತ್ತದೆ. ಸತತ ಮೂರು ದಿನಗಳವರೆಗೆ 5 ಮಿ.ಮೀ. ಶೇ.60ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಕಡಿಮೆ ಮಳೆಯಾಗಿದೆ. ಮುಂಗಾರು ಮಾರುತವು ಕೇರಳ ಮತ್ತು ದಕ್ಷಿಣ ಕರ್ನಾಟಕದ ಮೂಲಕ ಹಾದು ಜುಲೈ ಎರಡನೇ ವಾರದಲ್ಲಿ ರಾಜಸ್ಥಾನದ ಬಿಕನೇರ್ ತಲುಪುತ್ತದೆ. ಇದರೊಂದಿಗೆ, ಮುಂಗಾರು ಭಾರತದಾದ್ಯಂತ ಹರಡಿದೆ ಎಂದು ಐಎಂಡಿ ಅಂದು ಘೋಷಿಸಿತ್ತು. ಮುಂಗಾರು ಮಾರುತಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ನಿಧಾನಗತಿಯಲ್ಲಿ ಸಾಗುತ್ತವೆ. ಸತತವಾಗಿ ಐದು ದಿನಗಳ ಕಾಲ ಮಳೆ ಇರುವುದಿಲ್ಲ. ಈ ಸಮಯದಲ್ಲಿ ಮಾರುತಗಳು ದಿಕ್ಕನ್ನು ಬದಲಾಯಿಸಿದರೆ ಹಿಂಗಾರು ಆರಂಭವಾಗುತ್ತದೆ ಎಂದು ಐಎಂಡಿ ಪ್ರಕಟಿಸಿತ್ತು.ಆದರೆ, ಹೈದರಾಬಾದಿನ ಹವಾಮಾನ ಇಲಾಖೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ನಾಗರತ್ನರವರ ಪ್ರಕಾರ, ಮಾರುತಗಳು ದಿಕ್ಕನ್ನು ಬದಲಾಯಿಸಲು ವಿಳಂಬ ಮಾಡಿದರ ಪರಿಣಾಮ ಹಿಂಗಾರು ಮಳೆ ಪ್ರಾರಂಭವಾಗಲು ನಿಧಾನವಾಗಿದೆ.

ಮಾರುತಗಳ ಹಿಂಜರಿತದ ವಿಳಂಬದಿಂದಾಗಿ ತೆಲಂಗಾಣ ಮತ್ತು ಉತ್ತರ ಭಾರತದಲ್ಲಿ ಇನ್ನೂ ಮಳೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ ಪರಿವರ್ತನೆಯ ಅವಧಿ ತೆಲಂಗಾಣದಲ್ಲಿ ಮಾನ್ಸೂನ್ ಹಿಂಜರಿತವು ಸಾಮಾನ್ಯವಾಗಿ ಪ್ರತಿ ವರ್ಷ ಅಕ್ಟೋಬರ್ 15ರಂದಿಲೇ ಆರಂಭವಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್ 23ರವರೆಗೆ ವಿಳಂಬವಾಗಿದೆ, ಎಂದು ನಾಗರತ್ನ ಹೇಳಿದ್ದಾರೆ. ಅಕ್ಟೋಬರ್ ಅನ್ನು ಪರಿವರ್ತನೆಯ ಅವಧಿ ಎಂದು ಹೇಳಲಾಗುತ್ತದೆ. ಇದು ನೈರುತ್ಯ ಮಾನ್ಸೂನ್ ನಿರ್ಗಮನ ಮತ್ತು ಈಶಾನ್ಯ ಮಾನ್ಸೂನ್ ಆಗಮನದ ನಡುವಿನ ಅವಧಿ. ಆದರೆ, ಈಗ ನೈರುತ್ಯ ಮಾನ್ಸೂನ್ ನಿರ್ಗಮನ ವಿಳಂಬವಾಗಿರುವುದರಿಂದ, ಇನ್ನೂ ತೆಲಂಗಾಣದಲ್ಲಿ ಭಾರೀ ಮಳೆಯಾಗುತ್ತಿದೆಯಂತೆ. ಅಕ್ಟೋಬರ್ 18 ಮತ್ತು 19 ರಂದು ಹೈದರಾಬಾದ್‌ನಲ್ಲಿ ಮಳೆಯಾಗಲು ಸಹ ಇದೇ ಕಾರಣ. ಇದರ ಪರಿಣಾಮ ದಕ್ಷಿಣ ತೆಲಂಗಾಣದಲ್ಲಿ ಅಕ್ಟೋಬರ್ 23 ರವರೆಗೆ ಮಳೆ ಇರುತ್ತದೆ. ಉತ್ತರಾಖಂಡ ಪ್ರವಾಹಕ್ಕೆ ಕಾರಣಗಳೇನು? ಮತ್ತೊಂದೆಡೆ ಮಾನ್ಸೂನ್ ಮಾರುತಗಳು ಈಗಾಗಲೇ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ನಿರ್ಗಮಿಸಿವೆ. ಆದಾಗ್ಯೂ, ಉತ್ತರಾಖಂಡದಲ್ಲಿ ಪ್ರವಾಹ ವಿನಾಶಕಾರಿಯಾಗಿದೆ. ನೈರುತ್ಯ ಮಾನ್ಸೂನ್ ಮಾರುತಗಳು ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡವನ್ನು ಬಿಟ್ಟಿರುವುದು ನಿಜ. ಆದಾಗ್ಯೂ, ನೈರುತ್ಯ ಮಾನ್ಸೂನ್ ನಿರ್ಗಮನದ ನಂತರ, ವಾಯುವ್ಯದಿಂದ ಬಲವಾದ ಗಾಳಿ ಇಲ್ಲಿ ಬೀಸಲಾರಂಭಿಸುತ್ತಿದೆ. ಈ ಕಾರಣದಿಂದಾಗಿ, ಹವಾಮಾನವು ಉತ್ತರ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಅಲ್ಲಿ ಭಾರಿ ಮಳೆ ಮತ್ತು ಹಿಮ ಬೀಳುತ್ತಿದೆ. ಅಕ್ಟೋಬರ್ 18 ಮತ್ತು 19ರಂದು ಪಶ್ಚಿಮದ ಅಡಚಣೆಗಳಿಂದಾಗಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಿದೆ. ನೈನಿತಾಲ್, ಚಂಪಾವತ್ ಮತ್ತು ಪಂಚೇಶ್ವರದಂತಹ ಸ್ಥಳಗಳಲ್ಲಿ, 500 ಮಿ.ಮೀ. ಗಿಂತ ಹೆಚ್ಚು ಮಳೆಯಾಗಿದೆ. ಇದು ಉತ್ತರಾಖಂಡ್‌ ಪ್ರವಾಹಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಪೂರ್ವ ದಿಕ್ಕಿಗೆ ಚಲಿಸುತ್ತದೆಯಂತೆ. ನಂತರ ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಮುಂಗಾರು ತಿರುಗಿ, ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದಿಂದಾಗಿ ದೆಹಲಿ ಹಾಗೂ ಉತ್ತರ ಮತ್ತು ಮಧ್ಯ ಭಾರತದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.ಬೆಂಗಳೂರು: ಕೇರಳ ಹಾಗೂ ಉತ್ತರಾಖಂಡದಲ್ಲಿ ರಣ ಮಳೆ ಸುರಿಯುತ್ತಿದೆ. ಕರ್ನಾಟಕ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿಯೂ ಸಹ ಮಳೆಯಾರ್ಭಟ ಜೋರಾಗಿದೆ. ಕೇರಳದಲ್ಲಿ ಸರಿಸುಮಾರು 26 ಸ್ಥಳಗಳಲ್ಲಿ ಪ್ರವಾಹದ ಅಪಾಯವಿದೆ ಎಂದು ಘೋಷಿಸಲಾಗಿದೆ. ಮತ್ತೊಂದೆಡೆ ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 50ಕ್ಕೆ ಸಮೀಪಿಸುತ್ತಿದೆ.

ಅಕ್ಟೋಬರ್ 18ರಿಂದ ಹೈದರಾಬಾದ್‌ನಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 1960ರಿಂದ ಇದುವರೆಗೆ ಅತಿ ಹೆಚ್ಚು ಮಳೆ ಅಕ್ಟೋಬರ್‌ ತಿಂಗಳಿನಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. 1960ರಲ್ಲಿ ಒಟ್ಟು 93.4 ಮಿಮೀ ಮಳೆ ದಾಖಲಾಗಿತ್ತು, ಇದೇ ತಿಂಗಳ 20ರಂದು 94.6 ಮಿಮೀ ಮಳೆ ದಾಖಲಾಗಿದೆ.

ಸಾಮಾನ್ಯವಾಗಿ ಮುಂಗಾರು ಮಳೆ ಅಕ್ಟೋಬರ್‌ನಲ್ಲಿ ಕಡಿಮೆಯಾಗುತ್ತೆ. ಆದರೆ,ಸದ್ಯ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದಕ್ಕೆ ಕಾರಣವೇನು?

ದೇಶದ ವಿವಿಧ ಭಾಗಗಳಲ್ಲಿನ ಭಾರೀ ಮಳೆಗೆ ಮೂರು ಮುಖ್ಯ ಕಾರಣಗಳಿವೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಮೊದಲನೆಯದು ಕಡಿಮೆ ಒತ್ತಡ, ಎರಡನೆಯದು ಮಾನ್ಸೂನ್ ಹಿಂಪಡೆಯುವಿಕೆಯ ವಿಳಂಬ, ಮತ್ತು ಮೂರನೆಯದು ವಾಯುವ್ಯದಿಂದ ಬೀಸುತ್ತಿರುವ ಬಲವಾದ ಗಾಳಿ. ಈ ಮೂರು ಬೆಳವಣಿಗೆಗಳು ಪ್ರತಿ ಪ್ರದೇಶದ ಮೇಲೆ ವಿಶಿಷ್ಟ ಪರಿಣಾಮವನ್ನು ಬೀರುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜೂನ್ ಮೊದಲ ವಾರದಲ್ಲಿ ಕೇರಳದಲ್ಲಿ ಮುಂಗಾರು ಆರಂಭವಾಗುತ್ತದೆ. ಸತತ ಮೂರು ದಿನಗಳವರೆಗೆ 5 ಮಿ.ಮೀ. ಶೇ.60ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಕಡಿಮೆ ಮಳೆಯಾಗಿದೆ. ಮುಂಗಾರು ಮಾರುತವು ಕೇರಳ ಮತ್ತು ದಕ್ಷಿಣ ಕರ್ನಾಟಕದ ಮೂಲಕ ಹಾದು ಜುಲೈ ಎರಡನೇ ವಾರದಲ್ಲಿ ರಾಜಸ್ಥಾನದ ಬಿಕನೇರ್ ತಲುಪುತ್ತದೆ. ಇದರೊಂದಿಗೆ, ಮುಂಗಾರು ಭಾರತದಾದ್ಯಂತ ಹರಡಿದೆ ಎಂದು ಐಎಂಡಿ ಅಂದು ಘೋಷಿಸಿತ್ತು.

ಮುಂಗಾರು ಮಾರುತಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ನಿಧಾನಗತಿಯಲ್ಲಿ ಸಾಗುತ್ತವೆ. ಸತತವಾಗಿ ಐದು ದಿನಗಳ ಕಾಲ ಮಳೆ ಇರುವುದಿಲ್ಲ. ಈ ಸಮಯದಲ್ಲಿ ಮಾರುತಗಳು ದಿಕ್ಕನ್ನು ಬದಲಾಯಿಸಿದರೆ ಹಿಂಗಾರು ಆರಂಭವಾಗುತ್ತದೆ ಎಂದು ಐಎಂಡಿ ಪ್ರಕಟಿಸಿತ್ತು.ಆದರೆ, ಹೈದರಾಬಾದಿನ ಹವಾಮಾನ ಇಲಾಖೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ನಾಗರತ್ನರವರ ಪ್ರಕಾರ, ಮಾರುತಗಳು ದಿಕ್ಕನ್ನು ಬದಲಾಯಿಸಲು ವಿಳಂಬ ಮಾಡಿದರ ಪರಿಣಾಮ ಹಿಂಗಾರು ಮಳೆ ಪ್ರಾರಂಭವಾಗಲು ನಿಧಾನವಾಗಿದೆ. ಮಾರುತಗಳ ಹಿಂಜರಿತದ ವಿಳಂಬದಿಂದಾಗಿ ತೆಲಂಗಾಣ ಮತ್ತು ಉತ್ತರ ಭಾರತದಲ್ಲಿ ಇನ್ನೂ ಮಳೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

<blockquote class=”twitter-tweet”><p lang=”en” dir=”ltr”>18/10/2021: 19:45 IST; Light intensity intermittent rain/drizzle would occur over and adjoining areas of Nazibabad, Amroha, Moradabad, Sambhal, Bareilly, Narora, Sahaswan, Atrauli, Badayun, Ganjdundwara, Firozabad, Shikohabad (U.P.) during next 2 hours. <a href=”https://t.co/ieYbcsaA0H”>pic.twitter.com/ieYbcsaA0H</a></p>&mdash; India Meteorological Department (@Indiametdept) <a href=”https://twitter.com/Indiametdept/status/1450105898253250563?ref_src=twsrc%5Etfw”>October 18, 2021</a></blockquote> <script async src=”https://platform.twitter.com/widgets.js” charset=”utf-8″></script><blockquote class=”twitter-tweet”><p lang=”en” dir=”ltr”>18/10/2021: 19:45 IST; Light intensity intermittent rain/drizzle would occur over and adjoining areas of Nazibabad, Amroha, Moradabad, Sambhal, Bareilly, Narora, Sahaswan, Atrauli, Badayun, Ganjdundwara, Firozabad, Shikohabad (U.P.) during next 2 hours. <a href=”https://t.co/ieYbcsaA0H”>pic.twitter.com/ieYbcsaA0H</a></p>&mdash; India Meteorological Department (@Indiametdept) <a href=”https://twitter.com/Indiametdept/status/1450105898253250563?ref_src=twsrc%5Etfw”>October 18, 2021</a></blockquote> <script async src=”https://platform.twitter.com/widgets.js” charset=”utf-8″></script>

ಅಕ್ಟೋಬರ್ ಪರಿವರ್ತನೆಯ ಅವಧಿ

ತೆಲಂಗಾಣದಲ್ಲಿ ಮಾನ್ಸೂನ್ ಹಿಂಜರಿತವು ಸಾಮಾನ್ಯವಾಗಿ ಪ್ರತಿ ವರ್ಷ ಅಕ್ಟೋಬರ್ 15ರಂದಿಲೇ ಆರಂಭವಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್ 23ರವರೆಗೆ ವಿಳಂಬವಾಗಿದೆ, ಎಂದು ನಾಗರತ್ನ ಹೇಳಿದ್ದಾರೆ.

ಅಕ್ಟೋಬರ್ ಅನ್ನು ಪರಿವರ್ತನೆಯ ಅವಧಿ ಎಂದು ಹೇಳಲಾಗುತ್ತದೆ. ಇದು ನೈರುತ್ಯ ಮಾನ್ಸೂನ್ ನಿರ್ಗಮನ ಮತ್ತು ಈಶಾನ್ಯ ಮಾನ್ಸೂನ್ ಆಗಮನದ ನಡುವಿನ ಅವಧಿ. ಆದರೆ, ಈಗ ನೈರುತ್ಯ ಮಾನ್ಸೂನ್ ನಿರ್ಗಮನ ವಿಳಂಬವಾಗಿರುವುದರಿಂದ, ಇನ್ನೂ ತೆಲಂಗಾಣದಲ್ಲಿ ಭಾರೀ ಮಳೆಯಾಗುತ್ತಿದೆಯಂತೆ. ಅಕ್ಟೋಬರ್ 18 ಮತ್ತು 19 ರಂದು ಹೈದರಾಬಾದ್‌ನಲ್ಲಿ ಮಳೆಯಾಗಲು ಸಹ ಇದೇ ಕಾರಣ. ಇದರ ಪರಿಣಾಮ ದಕ್ಷಿಣ ತೆಲಂಗಾಣದಲ್ಲಿ ಅಕ್ಟೋಬರ್ 23 ರವರೆಗೆ ಮಳೆ ಇರುತ್ತದೆ.

ಉತ್ತರಾಖಂಡ ಪ್ರವಾಹಕ್ಕೆ ಕಾರಣಗಳೇನು?

ಮತ್ತೊಂದೆಡೆ ಮಾನ್ಸೂನ್ ಮಾರುತಗಳು ಈಗಾಗಲೇ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ನಿರ್ಗಮಿಸಿವೆ. ಆದಾಗ್ಯೂ, ಉತ್ತರಾಖಂಡದಲ್ಲಿ ಪ್ರವಾಹ ವಿನಾಶಕಾರಿಯಾಗಿದೆ.

ನೈರುತ್ಯ ಮಾನ್ಸೂನ್ ಮಾರುತಗಳು ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡವನ್ನು ಬಿಟ್ಟಿರುವುದು ನಿಜ. ಆದಾಗ್ಯೂ, ನೈರುತ್ಯ ಮಾನ್ಸೂನ್ ನಿರ್ಗಮನದ ನಂತರ, ವಾಯುವ್ಯದಿಂದ ಬಲವಾದ ಗಾಳಿ ಇಲ್ಲಿ ಬೀಸಲಾರಂಭಿಸುತ್ತಿದೆ. ಈ ಕಾರಣದಿಂದಾಗಿ, ಹವಾಮಾನವು ಉತ್ತರ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಅಲ್ಲಿ ಭಾರಿ ಮಳೆ ಮತ್ತು ಹಿಮ ಬೀಳುತ್ತಿದೆ.

ಅಕ್ಟೋಬರ್ 18 ಮತ್ತು 19ರಂದು ಪಶ್ಚಿಮದ ಅಡಚಣೆಗಳಿಂದಾಗಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಿದೆ. ನೈನಿತಾಲ್, ಚಂಪಾವತ್ ಮತ್ತು ಪಂಚೇಶ್ವರದಂತಹ ಸ್ಥಳಗಳಲ್ಲಿ, 500 ಮಿ.ಮೀ. ಗಿಂತ ಹೆಚ್ಚು ಮಳೆಯಾಗಿದೆ. ಇದು ಉತ್ತರಾಖಂಡ್‌ ಪ್ರವಾಹಕ್ಕೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಮುಂಗಾರು ಪೂರ್ವ ದಿಕ್ಕಿಗೆ ಚಲಿಸುತ್ತದೆಯಂತೆ. ನಂತರ ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಮುಂಗಾರು ತಿರುಗಿ, ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದಿಂದಾಗಿ ದೆಹಲಿ ಹಾಗೂ ಉತ್ತರ ಮತ್ತು ಮಧ್ಯ ಭಾರತದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

RECOMMENDED

HJP : ಬಿಜೆಪಿ ಪಕ್ಷಕ್ಕೆ ಟಕ್ಕರ್ ನೀಡಲು  ಹಿಂದೂಸ್ಥಾನ ಜನತಾ ಪಾರ್ಟಿ ಸಜ್ಜು…!

HJP : ಬಿಜೆಪಿ ಪಕ್ಷಕ್ಕೆ ಟಕ್ಕರ್ ನೀಡಲು ಹಿಂದೂಸ್ಥಾನ ಜನತಾ ಪಾರ್ಟಿ ಸಜ್ಜು…!

August 7, 2022
Big Boss Kannada OTT : ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲೇ ಆರಂಭವಾಯ್ತು ನಾಮಿನೇಷನ್!

Big Boss Kannada OTT : ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲೇ ಆರಂಭವಾಯ್ತು ನಾಮಿನೇಷನ್!

August 7, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

HJP : ಬಿಜೆಪಿ ಪಕ್ಷಕ್ಕೆ ಟಕ್ಕರ್ ನೀಡಲು  ಹಿಂದೂಸ್ಥಾನ ಜನತಾ ಪಾರ್ಟಿ ಸಜ್ಜು…!
Politics

HJP : ಬಿಜೆಪಿ ಪಕ್ಷಕ್ಕೆ ಟಕ್ಕರ್ ನೀಡಲು ಹಿಂದೂಸ್ಥಾನ ಜನತಾ ಪಾರ್ಟಿ ಸಜ್ಜು…!

August 7, 2022
Big Boss Kannada OTT : ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲೇ ಆರಂಭವಾಯ್ತು ನಾಮಿನೇಷನ್!
Entertainment

Big Boss Kannada OTT : ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲೇ ಆರಂಭವಾಯ್ತು ನಾಮಿನೇಷನ್!

August 7, 2022
Wikipedia : ಯಶವಂತ್ ನಟನೆಯ ‘ವಿಕಿಪೀಡಿಯ’ ಸಿನಿಮಾದ ಟ್ರೇಲರ್ ರಿಲೀಸ್…ಆಗಸ್ಟ್ 26ಕ್ಕೆ ತೆರೆಗೆ ಬರ್ತಿದೆ ಸಿನಿಮಾ
Entertainment

Wikipedia : ಯಶವಂತ್ ನಟನೆಯ ‘ವಿಕಿಪೀಡಿಯ’ ಸಿನಿಮಾದ ಟ್ರೇಲರ್ ರಿಲೀಸ್…ಆಗಸ್ಟ್ 26ಕ್ಕೆ ತೆರೆಗೆ ಬರ್ತಿದೆ ಸಿನಿಮಾ

August 7, 2022
Commonwealth Games 2022 : ಟ್ರಿಪಲ್‌ ಜಂಪ್‌ನಲ್ಲಿ ಭಾರತಕ್ಕೆ ಡಬಲ್ ಧಮಾಕಾ
Uncategorized

Commonwealth Games 2022 : ಟ್ರಿಪಲ್‌ ಜಂಪ್‌ನಲ್ಲಿ ಭಾರತಕ್ಕೆ ಡಬಲ್ ಧಮಾಕಾ

August 7, 2022
Noida : ಬಿಜೆಪಿ ಮುಖಂಡನ ದರ್ಪ ; ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ ನಾಯಕನ ಮೇಲೆ ಎಫ್‌ಐಆರ್
Just-In

Noida : ಬಿಜೆಪಿ ಮುಖಂಡನ ದರ್ಪ ; ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ ನಾಯಕನ ಮೇಲೆ ಎಫ್‌ಐಆರ್

August 7, 2022
Idgah Ground: ಚಾಮರಾಜಪೇಟೆ ಮೈದಾನದಲ್ಲಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ಮಾಡ್ಬೇಕು: ನಾಗರೀಕ ಒಕ್ಕೂಟ ಸಮಿತಿ
Uncategorized

Idgah Ground: ಚಾಮರಾಜಪೇಟೆ ಮೈದಾನದಲ್ಲಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ಮಾಡ್ಬೇಕು: ನಾಗರೀಕ ಒಕ್ಕೂಟ ಸಮಿತಿ

August 7, 2022
Love 360: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ “ಲವ್ 360” ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.
Entertainment

Love 360: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ “ಲವ್ 360” ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

August 7, 2022
Mysore Dasara: ದಸರಾ ಗಜಪಯಣಕ್ಕೆ ಚಾಲನೆ ನೀಡಿದ ಎಸ್.ಟಿ.ಸೋಮಶೇಖರ್
Karnataka

Mysore Dasara: ದಸರಾ ಗಜಪಯಣಕ್ಕೆ ಚಾಲನೆ ನೀಡಿದ ಎಸ್.ಟಿ.ಸೋಮಶೇಖರ್

August 7, 2022
Next Post
ಭಾರತೀಯ ವಾಯುಪಡೆ ವಿಮಾನ ಪತನ: ಪೈಲಟ್ ಸ್ಥಿತಿ ಗಂಭೀರ

ಭಾರತೀಯ ವಾಯುಪಡೆ ವಿಮಾನ ಪತನ: ಪೈಲಟ್ ಸ್ಥಿತಿ ಗಂಭೀರ

Gauri Lankesh ; ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ KCOCA ಪ್ರಕರಣ ಮರು ಸ್ಥಾಪಿಸಿ- ಸುಪ್ರೀಂಕೋರ್ಟ್

Gauri Lankesh ; ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ KCOCA ಪ್ರಕರಣ ಮರು ಸ್ಥಾಪಿಸಿ- ಸುಪ್ರೀಂಕೋರ್ಟ್

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist