Secular TV
Sunday, April 2, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಮಹಿಳೆಯರ ಮಾನಸಿಕ ಆರೋಗ್ಯಕ್ಕೆ ಪೆಟ್ಟು ನೀಡುವ PCOS: ಚಿಂತೆ ಬೇಡ, ಪರಿಹಾರವಿದೆ

Secular TVbySecular TV
A A
Reading Time: 2 mins read
ಮಹಿಳೆಯರ ಮಾನಸಿಕ ಆರೋಗ್ಯಕ್ಕೆ ಪೆಟ್ಟು ನೀಡುವ PCOS: ಚಿಂತೆ ಬೇಡ, ಪರಿಹಾರವಿದೆ
0
SHARES
Share to WhatsappShare on FacebookShare on Twitter

ಪಿಸಿಒಎಸ್‌ ಅಥವಾ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ (Polycystic ovary syndrome) ಬಗ್ಗೆ ಜನರಿಗೆ ಮಾಹಿತಿ ನೀಡಲು ಸೆಪ್ಟೆಂಬರ್‌ ತಿಂಗಳನ್ನು “ಪಿಸಿಒಎಸ್‌ ಜಾಗೃತಿ ತಿಂಗಳು” ಎಂದು ಆಚರಿಸಲಾಗುತ್ತಿದೆ. ನಿಮ್ಮ ಸೆಕ್ಯುಲರ್‌ ಟಿವಿ ಕೂಡ ಈ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಪಿಸಿಒಎಸ್‌ ಸಮಸ್ಯೆಯಿಂದ ಮಹಿಳೆಯ ದೇಹದಲ್ಲಿ ಪುರುಷ ಹಾರ್ಮೋನ್‌ಗಳನ್ನು ವೃದ್ಧಿಯಾಗುವುದು, ದೇಹದ ಅನೇಕ ಭಾಗಗಳಲ್ಲಿ ಕೂದಲು ಬೆಳೆಯುವುದು, ಮೊಡವೆಗಳು ಹೆಚ್ಚಾಗುವುದು ಮುಂತಾದ ಸಮಸ್ಯೆಗಳನ್ನು ತಂದು ಇರುಸುಮುರುಸು ಉಂಟು ಮಾಡುತ್ತದೆ. ಅದೇ ರೀತಿ, ಮಹಿಳೆಯ ಮನಸ್ಸಿನ ಮೇಲೂ ಪಿಸಿಎಸ್‌ಒ ಸಾಕಷ್ಟು ಪರಿಣಾಮ ಬೀರುತ್ತದೆ. ಇದರ ಬಗ್ಗೆ ಈ ಲೇಖನದಲ್ಲಿ ಇಂದು ತಿಳಿದುಕೊಳ್ಳೋಣ ಬನ್ನಿ.

ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಪಿಸಿಒಎಸ್‌ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಕುರಿತು ಹಲವು ವೈದ್ಯಕೀಯ ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಆರೋಗ್ಯವಂತ ಮಹಿಳೆಯರಿಗಿಂತ ಮೂರು ಪಟ್ಟು ಹೆಚ್ಚು ಆತಂಕವು ಪಿಸಿಒಎಸ್‌ ಇರುವ ಮಹಿಳೆಯರನ್ನು ಕಾಡುತ್ತಿರುತ್ತದೆ. ಮುಂದೆ ಏನಾಗುತ್ತದೆಯೋ ಏನೋ ಎಂಬ ಚಿಂತೆಯು ಸದಾ ಅವರನ್ನು ಬಾಧಿಸುತ್ತಿರುತ್ತದೆ. ಮಾನಸಿಕ ಖಿನ್ನತೆ ಅಥವಾ ಡಿಪ್ರೆಷನ್‌ ಹೋಗುವುದು ಕೂಡ ಪಿಸಿಒಎಸ್‌ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರೇ ಹೆಚ್ಚು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಮಾನಸಿಕ ಖಿನ್ನತೆ:

ತಾನು ತೆಳ್ಳಗಿರಬೇಕು, ಜೀರೋ ಸೈಜ್‌ ದೇಹದಿಂದ ಕಂಗೊಳಿಸಬೇಕು ಎಂದು ಮಹಿಳೆಯರು ಬಯಸುವುದು ಸಹಜ. ಆದರೆ ಆ ಆಸೆಗೆ ಪಿಸಿಒಎಸ್‌ ಸಮಸ್ಯೆ ಅಡ್ಡಗಾಲು ಹಾಕುತ್ತದೆ. ಅತಿಯಾಗಿ ದಪ್ಪವಾಗುವಂತೆ ಮಾಡಿ ತನ್ನ ದೇಹ ಕುರೂಪವಾಗಿದೆ ಎಂಬ ಭಾವನೆ ಹುಟ್ಟಿಸುತ್ತದೆ. ಜೊತೆಗೆ, ಪಿಸಿಒಎಸ್‌ನಿಂದ ಮೊಡವೆಗಳು ಏಳುವುದು ಕೂಡ ಸೂಕ್ಷ್ಮ ಮನಸ್ಸಿನ ಮಹಿಳೆಯರನ್ನು ಕುಗ್ಗಿಸುತ್ತದೆ. ಈ ಕಾರಣಗಳಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಕಡಿಮೆ ಉತ್ಸಾಹ:

ಪಿಸಿಒಎಸ್‌ಯಿಂದ ದೇಹಕ ತೂಕ ಅಧಿಕವಾಗುವುದರಿಂದ ಸೋಮಾರಿತನ ಜಾಸ್ತಿಯಾಗುತ್ತದೆ. ಹೆಚ್ಚು ಹೊತ್ತು ನಿದ್ದೆ ಮಾಡಬೇಕು, ಕುಳಿತಲ್ಲೇ ಕುಳಿತಿರಬೇಕು ಎಂಬ ಮನಸ್ಥಿತಿ ಉಂಟಾಗುತ್ತದೆ. ಜೀವನದ ಆಗುಹೋಗುಗಳ ಬಗ್ಗೆ ಉತ್ಸಾಹ ಕುಂದುತ್ತದೆ. ಉದ್ಯೋಗ ಮಾಡುತ್ತಿರುವ ಮಹಿಳೆಯರ ವೃತ್ತಿ ಜೀವನದ ಮೇಲೂ ಪಿಸಿಒಎಸ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಏಕಾಂಗಿತನ:

ಮನೆಯಲ್ಲೇ ಇದ್ದುಬಿಡೋಣ, ಹೊರಗೆ ಹೋಗುವುದು ಬೇಡ, ಯಾರನ್ನೂ ಭೇಟಿಯಾಗುವುದು ಬೇಡ ಎಂದು ಪಿಸಿಒಎಸ್‌ ಇರುವ ಅನೇಕರಿಗೆ ಅನಿಸುತ್ತಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಜಗತ್ತಿನಲ್ಲಿ ಎಲ್ಲರೂ ಸುಖವಾಗಿದ್ದಾರೆ, ತಾನು ಮಾತ್ರ ಸಮಸ್ಯೆ ಅನುಭವಿಸುತ್ತಿದ್ದೇನೆ ಎಂಬ ಭ್ರಮೆ ಆವರಿಸುತ್ತದೆ. ಯಾರಾದರೂ ಸಮಸ್ಯೆ ಬಗ್ಗೆ ಪ್ರಶ್ನಿಸಿದರೆ, ಗೇಲಿ ಮಾಡಿದರೆ ಏನು ಮಾಡುವುದು ಎಂಬ ಕಳವಳದಿಂದ ಏಕಾಂಗಿಯಾಗೇ ಇರಲು ಹೆಚ್ಚು ಇಷ್ಟಪಡುತ್ತಾರೆ.

ವಿನಾಕಾರಣ ಕೋಪ:

ಪಿಸಿಒಎಸ್‌ ಸಮಸ್ಯೆ ತೀವ್ರಗೊಂಡಾಗ ವಿನಾಕಾರಣ ಕೋಪಗೊಳ್ಳವುದು, ಚಿಕ್ಕಚಿಕ್ಕ ವಿಷಯಕ್ಕೂ ರೇಗಾಡುವುದು ಜಾಸ್ತಿಯಾಗಬಹುದು. ದೇಹದೊಳಗೆ ಹಾರ್ಮೊನಿನಲ್ಲಿ ಉಂಟಾಗುವ ಏರುಪೇರು ಇದಕ್ಕೆ ಕಾರಣ. ಮನಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಇದನ್ನೂ ಓದಿ: ಮಹಿಳೆಯರಲ್ಲಿ ಹೆಚ್ಚುತ್ತಿರುವ PCOS: ಆತಂಕ ಬೇಡ, ಇಲ್ಲಿದೆ ನಿಯಂತ್ರಣ ವಿಧಾನ

ಚಿಂತೆ ಬೇಡ, ಎಲ್ಲದಕ್ಕೂ ಪರಿಹಾರವಿದೆ!

ಪಿಸಿಒಎಸ್‌ನಿಂದಾಗಿ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದು ಅನಿಸಿದರೆ, ಭಾರೀ ಚಿಂತೆ ಮಾಡಿಕೊಳ್ಳುವ ಅಗತ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ. ಧೈರ್ಯ ಕಳೆದುಕೊಳ್ಳದೇ ತನ್ನ ನೋವನ್ನು ಪೋಷಕರು ಅಥವಾ ಸಂಗಾತಿಯ ಹತ್ತಿರ ಹಂಚಿಕೊಳ್ಳಬೇಕು. ಮಾನಸಿಕ ವೈದ್ಯರು ಕೌನ್ಸಿಲಿಂಗ್ ಮೂಲಕ ಇದನ್ನು ಗುಣಪಡಿಸಬಲ್ಲರು. ವೈದ್ಯರ ಸಲಹೆಗಳನ್ನು ಪಡೆದು, ಅದಕ್ಕೆ ತಕ್ಕಂತೆ ಜೀವನ ಕ್ರಮ ಹಾಗೂ ಯೋಚನಾ ಲಹರಿಯನ್ನು ಬದಲಿಸಿಕೊಂಡು ಪಿಸಿಒಎಸ್‌ ಇದ್ದರೂ ಆರಾಮಾಗಿ ಜೀವನವನ್ನು ಮುನ್ನಡೆಸಬಹುದು. ಇದನ್ನೂ ಓದಿ: PCOS ಇರುವವರು ಗರ್ಭ ಧರಿಸಲು ಸಾಧ್ಯವೇ? ಯಾವ ವಯಸ್ಸು ಹೆಚ್ಚು ಸೂಕ್ತ?

RECOMMENDED

Ramanagara: ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿ, ಮುಸ್ಲಿಂ ದನದ ವ್ಯಾಪಾರಿಯ ಹತ್ಯೆ; ಶಂಕಿತ ಪುನೀತ್ ಕೆರೆಹಳ್ಳಿ ಬಂಧನ

Ramanagara: ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿ, ಮುಸ್ಲಿಂ ದನದ ವ್ಯಾಪಾರಿಯ ಹತ್ಯೆ; ಶಂಕಿತ ಪುನೀತ್ ಕೆರೆಹಳ್ಳಿ ಬಂಧನ

April 2, 2023
DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

March 26, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

Ramanagara: ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿ, ಮುಸ್ಲಿಂ ದನದ ವ್ಯಾಪಾರಿಯ ಹತ್ಯೆ; ಶಂಕಿತ ಪುನೀತ್ ಕೆರೆಹಳ್ಳಿ ಬಂಧನ
Crime

Ramanagara: ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿ, ಮುಸ್ಲಿಂ ದನದ ವ್ಯಾಪಾರಿಯ ಹತ್ಯೆ; ಶಂಕಿತ ಪುನೀತ್ ಕೆರೆಹಳ್ಳಿ ಬಂಧನ

April 2, 2023
DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್
Just-In

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

March 26, 2023
Mekedatu Padayathra: ನಾಳೆಯಿಂದ ಮೇಕೆದಾಟು  ​ಪಾದಯಾತ್ರೆ ಆರಂಭ! ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಸಮ್ಮತಿ
Just-In

ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ-DK Shivkumar

March 26, 2023
Web Story : Dk Shivakumar : ರಾಜ್ಯದಲ್ಲಿ ಕಾಂಗ್ರೆಸ್ ಬಂದ್ರೆ ಡಬಲ್ ಬೆಡ್ ರೂಮ್ ಮನೆ : ಡಿಕೆಶಿ ಭರವಸೆ
Just-In

siddaramaiah:ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ಈ ನಾಡಿಗೆ ಎಸಗಿರುವ ದ್ರೋಹ, ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು: ಸಿದ್ದರಾಮಯ್ಯ

March 26, 2023
ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ
India

ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ

March 26, 2023
ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.
Entertainment

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

March 25, 2023
KPCC: ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆ
Just-In

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದ ಕಾಂಗ್ರೆಸ್‌, ಜಾತಿ ಲೆಕ್ಕಾಚಾರ ಇಲ್ಲಿದೆ ನೋಡಿ…

March 25, 2023
Dk sivakumar: ರಾಜ್ಯದಲ್ಲಿ ಭಾರತ ಜೋಡೋ ಯಶಸ್ಸಿಗೆ ಡಿಕೆಶಿ ಸಂತಸ
Politics

DK Shivkumar On Rahul Gandhi: ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿಯವರನ್ನು ಅನರ್ಹ ಮಾಡಲಾಗಿದೆ: ಡಿ.ಕೆ. ಶಿವಕುಮಾರ್

March 25, 2023
Next Post
Bharat bandh : ಕೃಷಿ ಕಾಯ್ದೆ ತಿದ್ದುಪಡಿಗೆ ವಿರೋಧ; ಇಂದು ಭಾರತ್‌ ಬಂದ್ – ಏನಿದೆ? ಏನಿಲ್ಲ?

Bharat bandh : ಕೃಷಿ ಕಾಯ್ದೆ ತಿದ್ದುಪಡಿಗೆ ವಿರೋಧ; ಇಂದು ಭಾರತ್‌ ಬಂದ್ - ಏನಿದೆ? ಏನಿಲ್ಲ?

Bharat Bandh Updates : ಭಾರತ್‌ ಬಂದ್ ಗೆ ಶಿವಾಜಿನಗರ ನೀರಸ ಪ್ರತಿಕ್ರಿಯೆ

Bharat Bandh Updates : ಭಾರತ್‌ ಬಂದ್ ಗೆ ಶಿವಾಜಿನಗರ ನೀರಸ ಪ್ರತಿಕ್ರಿಯೆ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist