ಇಂದೋರ್ (ಸೆ.7): ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಆರ್ಎಸ್ಎಸ್ ವಿಚಾರ ಬೋಧಿಸುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಖಂಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮಾ, ವೈದ್ಯರು ಆಪರೇಷನ್ ಟೇಬಲ್ ಮೇಲೆ ಹೆಡ್ಗೆವಾರ್ ಮತ್ತು ಉಪಾಧ್ಯಾಯ ಅವರ ಪುಸ್ತಕಗಳನ್ನು ಇಟ್ಟು ಕೊಂಡು ಆಪರೇಷನ್ ಮಾಡಲಿದ್ದಾರೆ. ಆರ್ಎಸ್ಎಸ್ನ ಸಿದ್ಧಾಂತವನ್ನು ಹೇರಲು ಬಿಜೆಪಿಯವರು ದೇಶವನ್ನು ವಿಭಜಿಸಬಹುದು ಎಂದೂ ಆರೋಪಿಸಿದ್ದಾರೆ.

ಇನ್ನು ಇದೇ ವೇಳೆ ವ್ಯಾಪಂ ಹಗರಣದ ಬಗ್ಗೆ ಮಾತನಾಡಿದ ವರ್ಮಾ, `ದೇಶದ ಜನರು ವೈದ್ಯರನ್ನು ದೇವಧೂತರೆಂದು ಭಾವಿಸುತ್ತಾರೆ. ಆದರೆ, ಮಧ್ಯಪ್ರದೇಶದಲ್ಲಿನ ವ್ಯಾಪಂ ಹಗರಣ ವೈದ್ಯರನ್ನು ದೇವಧೂತರ ಬದಲು ದೆವ್ವಗಳನ್ನಾಗಿಸಿದೆʼ ಎಂದರು.
ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ ಸಾರಂಗ್ ಮಾತನಾಡಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಆರ್ಎಸ್ಎಸ್ ಸಂಸ್ಥಾಪಕ ಡಾ.ಕೇಶವ ಹೆಡ್ಗೆವಾರ್ ಮತ್ತು ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಬಗ್ಗೆ ಬೋಧಿಸಲಾಗುತ್ತದೆ ಎಂದು ಹೇಳಿದ್ರು