ಬೆಂಗಳೂರು (ಸೆ.2): ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿ ಅಂದ್ರೆ ನೆನಪಾಗೋದು `ಬಾಲಿಕಾ ವಧು’. ಈ ಬಾಲಿಕ ವಧು ಕನ್ನಡ ಅವತರಣೀಕೆಯೇ ಪುಟ್ಟ ಗೌರಿ ಮದುವೆ. ಹಿಂದಿಯಲ್ಲಿ ಪ್ರಸಾರವಾದ ಬಾಲಿಕಾ ವಧು ಧಾರಾವಾಹಿಯ ಪಾತ್ರಗಳು ಇಂದಿಗೂ ಎಲ್ಲರಿಗು ಅಚ್ಚುಮೆಚ್ಚು. ವಿಪರ್ಯಾಸ ಅಂದರೆ, ಈ ಧಾರಾವಾಹಿಯಲ್ಲಿ ನಟಿಸಿದ ಪ್ರಮುಖ ಪಾತ್ರಧಾರಿಗಳು ಇಂದು ನಮ್ಮೊಂದಿಗಿಲ್ಲ. ಈ ಧಾರಾವಾಹಿಯ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡ ನಟಿ ಪ್ರತ್ಯುಷಾಬ್ಯಾನರ್ಜಿ, ನಟ ಸಿದ್ದಾರ್ಥ್ ಶುಕ್ಲಾ ಮತ್ತು ಅಜ್ಜಿ ಪಾತ್ರಧಾರಿ ಸುರೇಖ ಸಿಕ್ರಿ, ಈ ಮೂವರು ಈಹಲೋಕ ತ್ಯಜಿಸಿದ್ದಾರೆ.
I did some editing..though i m not at all good in these things but tried. #8YearsOfShivrajShekhar pic.twitter.com/tNKOfgxxSg
— Hetvi 💖✨ (@Hetvi_SN) May 14, 2020
ಬಾಲಿಕಾ ವಧುವಿನಲ್ಲಿ ನಟಿಸಿದ್ದ ನಟ ಸಿದ್ದಾರ್ಥ್ ಶುಕ್ಲಾ ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ. ಈ ಸುದ್ದಿ ಬಾಲಿವುಡ್ ಮಂದಿಯನ್ನ ಶಾಕ್ಗೆ ದೂಡಿದೆ. ನಿಮಗೆಲ್ಲಾ ಗೊತ್ತಿರಬಹುದು, ಬಾಲಿಕಾ ವಧುವಿನಲ್ಲಿ ಆನಂದಿ ಪಾತ್ರದಲ್ಲಿ ನಟಿಸಿದ್ದ ನಟಿ ಪ್ರತ್ಯುಷಾ ಬ್ಯಾನರ್ಜಿ ಕೂಡ ನಮ್ಮೊಂದಿಗಿಲ್ಲ. ಪ್ರತ್ಯಷಾ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಪ್ರಿಯಕರ ರಾಹುಲ್ ರಾಜ್ ಸಿಂಗ್ , ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆರೋಪಿಸಿ ಆತನ ಮೇಲೆ , ಪ್ರತ್ಯುಷಾಳ ತಂದೆ ತಾಯಿ ದೂರು ದಾಖಲಿಸಿ, ನ್ಯಾಯಕ್ಕಾಗಿ ಈವರೆಗೂ ಹೋರಾಟ ನಡೆಸುತ್ತಿದ್ದಾರೆ.
How can someone look so intense and hot !
— ᴺᵘˢʰ🤍 (@YeDillMera) May 14, 2020
Shiv is a dream man of every girl 💕@sidharth_shukla u played Shiv beautifully ❤️#8YearsOfShivrajShekhar pic.twitter.com/kX70k7P4qp
ಪ್ರತ್ಯುಷಾ ಹಾಗೂ ಸಿದ್ದಾರ್ಥ್ ನಡುವಿನ ಕೆಮೆಸ್ಟ್ರಿಗೆ ಹಿಂದಿ ಕಿರುತೆರೆ ಮಂದಿ ಫಿದಾ ಆಗಿದ್ರು. ಇವರಿಬ್ಬರ ನಟನೆ ಕತೆಗೆ ಹೇಳಮಾಡಿಸಿದ ಹಾಗಿತ್ತು. ಹೀಗಾಗಿಯೇ ಈ ಧಾರಾವಾಹಿ ಬರೋಬ್ಬರಿ ೯ ವರ್ಷ ಯಶಸ್ವಿಯಾಗಿ ಪ್ರದರ್ಶನ ಕಾಣಲು ಸಾಧ್ಯವಾಗಿತ್ತು.
#SidharthShukla in an interview,
— Nɪᴅʜɪ ✨ (@NidhiiTweets_) May 14, 2020
" Balika Vadhu & Shiv both will always remain special in my life & memories"
This was not just a show, This was Benchmark Performance of @sidharth_shukla which made him Unique in industry💞 A special bonding with Costars#8YearsOfShivrajShekhar pic.twitter.com/QLn1MC3pNe
ಈ ಧಾರಾವಾಹಿಯ ಮತ್ತೊಂದು ಪ್ರಮುಖ ಪಾತ್ರವೆಂದರೆ ಕಲ್ಯಾಣಿ ದೇವಿ. ಈ ಧಾರಾವಾಹಿಯ ದಾದೀಸ(ಅಜ್ಜಿ) ಎಂದರೆ ಪ್ರತಿಯೊಬ್ಬ ಧಾರಾವಾಹಿ ಪ್ರೀಯರು ಪರಿಚಿತ. ಕಲ್ಯಾಣಿ ದೇವಿ ಪಾತ್ರವನ್ನು3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಸುರೇಖಾ ಸಿಕ್ರಿ ಅದ್ಭುತವಾಗಿ ನಿರ್ವಹಿಸಿದ್ದರು. ದುರರೃಷ್ಟವಶಾತ್ ಎರಡು ಬಾರಿ ಬ್ರೈನ್ ಸ್ಟ್ರೋಕ್ಗೆ ತುತ್ತಾದ ಸುರೇಖಾ ಸಿಕ್ರಿಯವರು 2021ರ ಜುಲೈ 16ರಂದು ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು.
ಇಂದು ಇದೇ ಧಾರಾವಾಹಿಯಲ್ಲಿ ಡಿಸಿ ಶಿವರಾಜ್ ಶೇಖರ್ ಪಾತ್ರ ನಿರ್ವಹಿಸಿದ್ದ ಸಿದ್ದಾರ್ಥ್ ಶುಕ್ಲಾ ಹೃದಾಯಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳು ಇಹಲೋಕ ತ್ಯಜಿಸಿದ್ದಾರೆ. ಆದರೆ, ಅಭಿಮಾನಿಗಳ ಮನಸ್ಸಿನಲ್ಲಿ ಈ ಪಾತ್ರಗಳು ಎಂದೆಂದಿಗೂ ಅಮರವಾಗಿರಲಿವೆ.