Secular TV
Wednesday, March 29, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಒಬ್ಬ ಕೂಲಿಗಾರನ ಮಗ 238 ಕೋಟಿ ರೂ. ಸಂಸ್ಥೆಯ ಒಡೆಯನಾದ ಕಥೆ

Secular TVbySecular TV
A A
Reading Time: 1 min read
ಒಬ್ಬ ಕೂಲಿಗಾರನ ಮಗ 238 ಕೋಟಿ ರೂ. ಸಂಸ್ಥೆಯ ಒಡೆಯನಾದ ಕಥೆ
0
SHARES
Share to WhatsappShare on FacebookShare on Twitter

ಬೆಂಗಳೂರು : “GODS OWN COUNTRY” ಅಂತಲೇ ಪ್ರಸಿದ್ದವಾದ ಕೇರಳ ರಾಜ್ಯದಲ್ಲಿರುವ, ವಾಯನಾಡ್ ಜಿಲ್ಲೆಯ ಒಂದು ಪುಟ್ಟ ಹಳ್ಳಿ ಚೆನ್ನಲೋಡ್ ಇಂದು ಪ್ರಸಿದ್ದತೆಯನ್ನು ಪಡೆದಿದೆ ಎಂದರೆ ಅದಕ್ಕೆ ಮೂಲ ಕಾರಣ ಅದೇ ಊರಿನ ಬಡ ಕುಟುಂಬದಲ್ಲಿ ಜನಿಸಿದ ಮುಸ್ತಾಫಾ ಪಿ ಸಿ ( Mustafa P C ) ಯವರು. ಅವರ ತಾಯಿ ಶಾಲೆಗೆ ಹೋಗಲಿಲ್ಲ ಮತ್ತು ಅವರ ತಂದೆ ಕಾಫಿ ತೋಟದಲ್ಲಿ ಕೂಲಿಯಾಗಿದ್ದರು. ತಮ್ಮ ಬಡತನವನ್ನು ತಮ್ಮ ದುರ್ಬಲತೆಯನ್ನು ಮಾಡಿಕೊಳ್ಳದೇ ಇಂದು 238 ಕೋಟಿ ರೂಪಾಯಿಗಳ ವಹಿವಾಟು ಹೊಂದಿದ ಪ್ರಸಿದ್ದ ಐಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಳಾಗಿದ್ದರೆ. ಇವರ ಈ ರೋಚಕ ಕಥೆಯನ್ನು ಇಂದಿನ ಈ ವರದಿಯಲ್ಲಿ ನೋಡೋಣ ಬನ್ನಿ.


ಕಾಫಿ ತೋಟದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ತಮ್ಮ ತಂದೆಗೆ ಬಹಳ ಕಡಿಮೆ ಆದಾಯ ಬರುತ್ತಿತ್ತು, ಒಂದೊಂದು ದಿನ ಮೂರು ಹೊತ್ತು ಊಟ ಮಾಡುವುದು ಸಹ ನಮಗೆ ಕನಸಾಗಿತ್ತು ಎಂದು ತಮ್ಮ ಕಥೆ ಹೇಳಿಕೊಂಡ ಮುಸ್ತಾಫಾ ಪಿ ಸಿ ಯವರು ಇಂದು ಈ ಪ್ರಮಾಣದಲ್ಲಿ ಯಶಸ್ಸು ಪಡೆದಿದ್ದು ಹಲವಾರು ಯುವ ಉದ್ಯಮಿಗಳಿಗೆ ಆದರ್ಶವಾಗಿದ್ದಾರೆ. ಕಷ್ಟ ಪಟ್ಟು ಓದಿ ಇಂಜಿನಿಯರಿಂಗ್ ಪದವಿ ಪಡೆದ ಇವರು ಒಂದು ಒಳ್ಳೆಯ ಎಮ್ ಎನ್ ಸಿ ಕಂಪನಿಯಲ್ಲೂ ಸಹ ಉದ್ಯೋಗ ಪಡೆದಿದ್ದರು. ಅದೊಮ್ಮೆ ಆರನೆಯ ತರಗತಿಯಲ್ಲಿ ತಾವು ಶಾಲೆ ಬಿಟ್ಟು ತಮ್ಮ ಮನೆಯವರಿಗಾಗಿ ದುಡಿಯಲು ಹೋಗಿದ್ದರು ಎಂಬ ಅಂಶವನ್ನು ಸಹ ಮುಂಬೈಯಲ್ಲಿ ನಡೆದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ತಾವು ಮರಳಿ ಶಾಲೆಗೆ ಸೇರಲು ಪ್ರೇರೆಪಿಸಿ ಮನವೊಲಿಸಿದ ಶಿಕ್ಷಕರೊಬ್ಬರ ಕುರಿತು ನೆನಪಿಸಿಕೊಂಡು ಆ ಸಮಯದಲ್ಲಿ ಅವರು ಕೊಟ್ಟ ಆ ಉಚಿತ ಶಿಕ್ಷಣ ಕುರಿತು ಧನ್ಯತಾ ಭಾವ ತೋರಿಸಿದರು.

ತಾವು ಸಂಪಾದಿಸಿದ ಮೊದಲ 14,000/- ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ಅವರ ತಂದೆಯವರಿಗೆ ನೀಡಿದಾಗ ಅವರ ತಂದೆ ನನ್ನ ಜೀವಮಾನದಲ್ಲಿಯೇ ಇಷ್ಟು ಹಣವನ್ನು ನೋಡಿರಲಿಲ್ಲ ಎಂದಿದ್ದರಂತೆ. ಕೆಲ ಸಮಯದ ಬಳಿಕ ಮುಸ್ತಾಫಾ ಪಿ ಸಿ ರವರಿಗೆ ವಿದೇಶದಲ್ಲಿ ಉದ್ಯೋಗ ಸಿಕ್ಕು ಕೇವಲ ಎರಡು ತಿಂಗಳಲ್ಲಿ ಅವರ ಕುಟುಂಬದವರ ಸಂಪೂರ್ಣ ಸಾಲ ತೀರಿಸಿದ್ದರಂತೆ, ಉತ್ತಮ ಸಂಬಳದ ಉದ್ಯೋಗವನ್ನು ಹೊಂದಿದ್ದರೂ, ಅವರು ಯಾವಾಗಲೂ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರು ಎಂದು ಅವರು ಹೇಳಿದರು.

2005 ರಲ್ಲಿ, ಪಿ ಸಿ ಮುಸ್ತಫಾರವರು ಆಹಾರ ಉದ್ಯಮದಲ್ಲಿ ಐಡಿ ಫ್ರೆಶ್ ಫುಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು, ಇದೊಂದು ವಿನೂತನ ಪ್ರಯೋಗವಾಗಿದ್ದು ಇಡ್ಲಿ ಮತ್ತು ದೋಸೆ ಹಿಟ್ಟನ್ನು ತಾವೇ ತಯಾರಿಸಿ ಪ್ಯಾಕ್ ಮಾಡಿ ಅಂಗಡಿಗಳ ಮೂಲಕ ಗ್ರಾಹಕರಿಗೆ ತಲುಪಿಸುವ ಯೋಜನೆ ಅವರದ್ದಾಗಿತ್ತು. ಪಿ ಸಿ ಮುಸ್ತಫಾ ಅವರ ಸೋದರಸಂಬಂಧಿ ಒಮ್ಮೆ ಇಡ್ಲಿ-ದೋಸೆ ಹಿಟ್ಟನ್ನು ಪ್ಲ್ಯಾಸ್ಟಿಕ ಕವರೊಂದರಲ್ಲಿ ಹಾಕಿ ಮಾರಾಟ ಮಾಡುವ ಸರಬರಾಜುದಾರರನ್ನು ನೋಡಿದಾಗ ಐಡಿ ಫ್ರೆಶ್ ಫುಡ್‌ನ ಕಲ್ಪನೆ ಬಂದಿತು. ಆರಂಭದಲ್ಲಿ, ಮುಸ್ತಫಾ ಪಿಸಿ ಕಂಪನಿಯಲ್ಲಿ ₹50,000 ಹೂಡಿಕೆ ಮಾಡಿದರು ಮತ್ತು ಅವರ ಸೋದರಸಂಬಂಧಿಗೆ ಇದನ್ನು ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟರು. ಆರಂಭದಲ್ಲಿ ಈ ಸಂಸ್ಥೆಯು ಬೆಂಗಳೂರಿನ 20 ಅಂಗಡಿಗಳಿಗೆ ಒಂದು ಕಿಲೋಗ್ರಾಂ ಇಡ್ಲಿ ಮತ್ತು ದೋಸೆ ಹಿಟ್ಟಿನ ಹತ್ತು ಪ್ಯಾಕೆಟ್‌ಗಳನ್ನು ಪೂರೈಸುತ್ತಿತ್ತು. ಐಡಿ ಫ್ರೆಶ್ ಫುಡ್ ಸಂಸ್ಥೆಗೆ ದಿನಕ್ಕೆ 100 ಪ್ಯಾಕೆಟ್‌ಗಳ ಮಾರಾಟ ತಲುಪುವಲ್ಲಿ ಬರೊಬ್ಬರಿ 9 ತಿಂಗಳ ಸಮಯ ಹಿಡಿದಿತ್ತು. ಮೂರು ವರ್ಷಗಳ ನಂತರ, ತಮ್ಮ ಕಂಪನಿಗೆ ತಮ್ಮ ಪೂರ್ಣಾವಧಿ ಬೇಕು ಎಂದು ಅರಿತ ಮುಸ್ತಫಾ ತಮ್ಮ ಕೆಲಸವನ್ನು ಬಿಟ್ಟು ತಮ್ಮ ಎಲ್ಲ ಉಳಿತಾಯವನ್ನು ಈ ಸಂಸ್ಥೆಯಲ್ಲಿ ತೊಡಗಿಸಿದರು. ಸಂಸ್ಥೆಯು ಮೊದಲ ದಿನದಿಂದಲೇ ಲಾಭಗಳಿಸಲು ಪ್ರಾರಂಬಿಸಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮುಸ್ತಫಾ ಹೆಚ್ಚು ಯಂತ್ರಗಳನ್ನು ಖರೀದಿಸಲು ಮತ್ತು 800 ಚದರ ಅಡಿಗಳ ದೊಡ್ಡ ಜಾಗಕ್ಕೆ ಹೋಗಲು 6 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರು. ಇವತ್ತು ನೂರಾರು ಅಂಗಡಿಗಳ ಮೂಲಕ ಬಹುತೇಕ ಎಲ್ಲ ಮೆಟ್ರೋ ಸಿಟಿಗಳಲ್ಲಿ ಮಾರಾಟವಾಗುತ್ತಿರುವ ಐಡಿ ಫ್ರೆಶ್ ಫುಡ್ ಉತ್ಪನ್ನಗಳು ಪಿ ಸಿ ಮುಸ್ತಫಾ Breakfast King of the Country ಎಂದು ಪ್ರಸಿದ್ದರಾಗಿದ್ದಾರೆ. ಪ್ರಸ್ತುತ ಐಡಿ ಫ್ರೆಶ್ ಫುಡ್ ಸಂಸ್ಥೆಯ ವಾರ್ಷಿಕ ವಹಿವಾಟು 238 ಕೋಟಿ ರೂಪಾಯಿಗಳು.

SecularTV SecularTVKannada

RECOMMENDED

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

March 26, 2023
Mekedatu Padayathra: ನಾಳೆಯಿಂದ ಮೇಕೆದಾಟು  ​ಪಾದಯಾತ್ರೆ ಆರಂಭ! ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಸಮ್ಮತಿ

ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ-DK Shivkumar

March 26, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್
Just-In

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

March 26, 2023
Mekedatu Padayathra: ನಾಳೆಯಿಂದ ಮೇಕೆದಾಟು  ​ಪಾದಯಾತ್ರೆ ಆರಂಭ! ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಸಮ್ಮತಿ
Just-In

ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ-DK Shivkumar

March 26, 2023
Web Story : Dk Shivakumar : ರಾಜ್ಯದಲ್ಲಿ ಕಾಂಗ್ರೆಸ್ ಬಂದ್ರೆ ಡಬಲ್ ಬೆಡ್ ರೂಮ್ ಮನೆ : ಡಿಕೆಶಿ ಭರವಸೆ
Just-In

siddaramaiah:ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ಈ ನಾಡಿಗೆ ಎಸಗಿರುವ ದ್ರೋಹ, ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು: ಸಿದ್ದರಾಮಯ್ಯ

March 26, 2023
ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ
India

ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ

March 26, 2023
ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.
Entertainment

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

March 25, 2023
KPCC: ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆ
Just-In

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದ ಕಾಂಗ್ರೆಸ್‌, ಜಾತಿ ಲೆಕ್ಕಾಚಾರ ಇಲ್ಲಿದೆ ನೋಡಿ…

March 25, 2023
Dk sivakumar: ರಾಜ್ಯದಲ್ಲಿ ಭಾರತ ಜೋಡೋ ಯಶಸ್ಸಿಗೆ ಡಿಕೆಶಿ ಸಂತಸ
Politics

DK Shivkumar On Rahul Gandhi: ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿಯವರನ್ನು ಅನರ್ಹ ಮಾಡಲಾಗಿದೆ: ಡಿ.ಕೆ. ಶಿವಕುಮಾರ್

March 25, 2023
Naresh-Pavithra Lokesh: ಮತ್ತೆ ಮದುವೆಯಾಗಿ ಮತ್ತೆ ಮದುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡಿದ ನಟ ಡಾ.ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್
Entertainment

Naresh-Pavithra Lokesh: ಮತ್ತೆ ಮದುವೆಯಾಗಿ ಮತ್ತೆ ಮದುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡಿದ ನಟ ಡಾ.ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್

March 24, 2023
Next Post
ಪ್ರಯಾಣಿಕನ ಜತೆ ಇದ್ದ ಕೋಳಿಗೂ ಟಿಕೆಟ್​ ಕೊಟ್ಟ ಬಸ್ ಕಂಡಕ್ಟರ್; ಫೋಟೊ ವೈರಲ್

ಪ್ರಯಾಣಿಕನ ಜತೆ ಇದ್ದ ಕೋಳಿಗೂ ಟಿಕೆಟ್​ ಕೊಟ್ಟ ಬಸ್ ಕಂಡಕ್ಟರ್; ಫೋಟೊ ವೈರಲ್

ಮಂಗಳೂರು ಕೋರ್ಟ್ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ

ಮಂಗಳೂರು ಕೋರ್ಟ್ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist