ಸಿಎಂ ಬೊಮ್ಮಾಯಿಯವರ ಸಚಿವ ಸಂಪುಟ ಇಂದು ರಚನೆಯಾಗುತ್ತಿದೆ. ಇಂದು 2.15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕೃತವಾಗಿ ನೂತನ ಸಚಿವರ ಪಟ್ಟಿ ರಾಜಭವನದ ಕಚೇರಿಯಿಂದ ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ.
ಇಂದಿನ ಸಚಿವ ಸಂಪುಟ ರಚನೆಯಲ್ಲಿ 8 ಲಿಂಗಾಯಿತ ಸಮುದಾಯದವರು, 7 ಒಕ್ಕಲಿಗ ಸಮುದಾಯದವರಿ, 7 OBC ಸಮುದಾಯದವರು, 3 SC, 1 ST, 1 ರೆಡ್ಡಿ, 1 ಮಹಿಳಾ ಮತ್ತು 1 ಬ್ರಾಹ್ಮಣ ಸಮುದಾಯದವರು ಸೇರಿದಂತೆ ಒಟ್ಟು 29 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಕುರಿತಂತೆ ಬಿಜೆಪಿ ರಾಷ್ಟ್ರೀಯ ನಾಯಕರು ನೇರವಾಗಿಯೇ ಮಾತನಾಡಿ ಹೇಳಿದ್ದಾರೆ. ಆ ಕುರಿತು ನಾನು ಏನೂ ಹೇಳೋದಿಲ್ಲ. ಪಟ್ಟಿ ಬಿಡುಗಡೆಯಾದ ನಂತ್ರ, ಸಂಪುಟದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದಾಗಿ ತಿಳಿಯಲಿದೆ. ಈಗ ಏನ್ ರಾಜ್ಯಪಾಲರಿಗೆ ಪಟ್ಟಿ ಕಳುಹಿಸಲಾಗಿದೆಯೋ, ಅದರಲ್ಲಿ ವಿಜಯೇಂದ್ರ ಅವರ ಹೆಸರು ಇಲ್ಲ ಎಂಬುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.
1. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
2. ಆರ್.ಅಶೋಕ್- ಪದ್ಮನಾಭ ನಗರ
3. ಬಿ.ಸಿ ಪಾಟೀಲ – ಹಿರೇಕೇರೂರು
4. ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
5. ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು
6. ಉಮೇಶ್ ಕತ್ತಿ- ಹುಕ್ಕೇರಿ
7. ಎಸ್.ಟಿ.ಸೋಮಶೇಖರ್- ಯಶವಂತಪುರ
8. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
9. ಬೈರತಿ ಬಸವರಾಜ – ಕೆ ಆರ್ ಪುರಂ
10. ಮುರುಗೇಶ್ ನಿರಾಣಿ – ಬಿಳಿಗಿ
11. ಶಿವರಾಂ ಹೆಬ್ಬಾರ್- ಯಲ್ಲಾಪುರ
12. ಶಶಿಕಲಾ ಜೊಲ್ಲೆ- ನಿಪ್ಪಾಣಿ
13. ಕೆ.ಸಿ.ನಾರಾಯಣ ಗೌಡ – ಕೆ.ಆರ್ ಪೇಟೆ
14. ಸುನೀಲ್ ಕುಮಾರ್ – ಕಾರ್ಕಳ
15. ಆರಗ ಜ್ಞಾನೇಂದ್ರ – ತೀರ್ಥ ಹಳ್ಳಿ
16. ಗೋವಿಂದ ಕಾರಜೋಳ-ಮುಧೋಳ
17. ಮುನಿರತ್ನ- ಆರ್.ಆರ್ ನಗರ
18. ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
20. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
21. ಹಾಲಪ್ಪ ಆಚಾರ್ – ಯಲ್ಬುರ್ಗ
22 . ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
23. ಕೋಟಾ ಶ್ರೀನಿವಾಸ ಪೂಜಾರಿ – ಎಂ.ಎಲ್.ಸಿ
24. ಪ್ರಭು ಚೌವ್ಹಾಣ್ – ಔರಾದ್
25. ವಿ.ಸೋಮಣ್ಣ – ಗೋವಿಂದ್ ರಾಜನಗರ
26. ಎಸ್ ಅಂಗಾರ- ಸುಳ್ಯ
27. ಆನಂದ್ ಸಿಂಗ್ – ಹೊಸಪೇಟೆ
28. ಸಿ.ಸಿ ಪಾಟೀಲ – ನರಗುಂದ
29. ಬಿಸಿ ನಾಗೇಶ್ – ತಿಪಟೂರು
ಸಂಪುಟದಿಂದ ಹೊರಗುಳಿದ ಹಿರಿಯರ ನಾಯಕರು…
1. ಜಗದೀಶ ಶೆಟ್ಟರ್
2. ಲಕ್ಷಣ ಸವದಿ
3. ಎಸ್. ಸುರೇಶ್ಕುಮಾರ್
4. ಆರ್.ಶಂಕರ್
5. ಶ್ರೀಮಂತ ಪಾಟೀಲ
6. ಸಿ.ಪಿ.ಯೋಗೇಶ್ವರ
7. ಅರವಿಂದ ಲಿಂಬಾವಳಿ