ಬೆಂಗಳೂರು : ನಿನ್ನೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ನಿಧನವಾಗಿದ್ದಾರೆ. ಸಂಚಾರಿ ವಿಜಯ್ ಮೆದುಳು ಇಂದು ಬೆಳಗ್ಗೆ 10 ಗಂಟೆ ವೇಳೆಗೆ ನಿಷ್ಕ್ರಿಯಗೊಂಡಿದ್ದು ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಘೋಷಿಸಿದ್ದಾರೆ.
Very very disheartening to accept that Sanchari Vijay breathed his last.
— Kichcha Sudeepa (@KicchaSudeep) June 14, 2021
Met him couple of times just bfr this lockdown,,,, all excited about his nxt film,, tats due for release.
Very sad.
Deepest Condolences to his family and friends.
RIP 🙏🏼
ಮೆದುಳು ನಿಷ್ಕ್ರಿಯಗೊಂಡ 5-6 ಗಂಟೆನಂತರ ದೇಹದ ಎಲ್ಲ ಅಂಗಾಂಗಳು ನಿಷ್ಕ್ರಿಯವಾಗುತ್ತವೆ ಈ ಹಿನ್ನಲೆ ಅವರ ಅಂಗಾಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಮತ್ತೆ ಹುಟ್ಟಿ ಬಾ ಗೆಳೆಯ 🙏 #RIP #SanchariVijay pic.twitter.com/3QXQcpbqh4
— Rishab Shetty (@shetty_rishab) June 14, 2021
ಕುಟುಂಬಸ್ಥರ ಒಪ್ಪಿಗೆ ಪಡೆದಿದ್ದು ವಿಜಯ್ ಅಂಗಾಂಗಳ ಕಸಿ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ಶೈಲೇಶ್ ಕುಮಾರ್ ಹೇಳಿದ್ದಾರೆ.
ಇಹಲೋಕದ ಸಂಚಾರ ನಿಲಿಸಿದ ಸಂಚಾರಿಗೆ ಭಾವಪೂರ್ಣ ವಿದಾಯ. #SanchariVijay#ಓಂಶಾಂತಿಃ pic.twitter.com/g9l0leNSYg
— C T Ravi 🇮🇳 ಸಿ ಟಿ ರವಿ (@CTRavi_BJP) June 14, 2021
ವೈದ್ಯರ ಘೋಷಣೆ ಹಿನ್ನಲೆ ಸಿನಿಮಾ ರಂಗದ ಗಣ್ಯರು ಕಂಬಣಿ ಮಿಡಿದಿದ್ದಾರೆ. ಸಂಚಾರಿ ವಿಜಯ್ ಸಾವಿಗೆ ಕಿಚ್ಚ ಸುದೀಪ್, ಶಾಸಕ ಸಿ.ಟಿ ರವಿ, ಅಮೂಲ್ಯ, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
THIS IS UNFAIR
— Amulya (@nimmaamulya) June 14, 2021
ಅನಿರೀಕ್ಷಿತ ಅಪಘಾತದಿಂದ ಅಗಲಿದ ಪ್ರತಿಭಾವಂತ ನಟ ,ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏 😢 @SanchariVijay pic.twitter.com/asVYgzD0Pj