Secular TV
Wednesday, August 17, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

11 ಜಿಲ್ಲೆಗಳಲ್ಲಿ ಲಾಕ್ಡೌನ್ ವಿಸ್ತರಣೆ – ಶನಿವಾರ ಭಾನುವಾರ ಕರುನಾಡು ಸಂಪೂರ್ಣ ಸ್ತಬ್ಧ – ಇಲ್ಲಿದೆ ಸರ್ಕಾರದ ಹೊಸ ಮಾರ್ಗಸೂಚಿ

Secular TVbySecular TV
A A
Reading Time: 2 mins read
11 ಜಿಲ್ಲೆಗಳಲ್ಲಿ ಲಾಕ್ಡೌನ್ ವಿಸ್ತರಣೆ – ಶನಿವಾರ ಭಾನುವಾರ ಕರುನಾಡು ಸಂಪೂರ್ಣ ಸ್ತಬ್ಧ – ಇಲ್ಲಿದೆ ಸರ್ಕಾರದ ಹೊಸ ಮಾರ್ಗಸೂಚಿ
0
SHARES
Share to WhatsappShare on FacebookShare on Twitter

ಬೆಂಗಳೂರು : ಜೂನ್ 14 ರ ಬಳಿಕ 11 ಜಿಲ್ಲೆಗಳಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬಾಕಿ ಜಿಲ್ಲೆಗಳಲ್ಲಿ ನಿಯಮಗಳ ಸಡಿಲಿಕೆ ತಿರ್ಮಾನಿಸಿದೆ. ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಹಿರಿಯ ಸಚಿವರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಜೂನ್ 14 ರಂದು ಲಾಕ್ಡೌನ್ ಅಂತ್ಯ ಹಿನ್ನಲೆ ಲಾಕ್ಡೌನ್ ವಿಸ್ತರಣೆ ಮತ್ತು ಸಡಿಲಿಕೆ ಸಂಬಂಧ ಇಂದು ಸಿಎಂ ಬಿಎಸ್‌ವೈ ಮ್ಯಾರಥಾನ್ ಸಭೆಗಳನ್ನು ನಡೆಸಿದರು. ಬೆಳಗ್ಗೆ ಹನ್ನೊಂದು ಗಂಟೆಗೆ ಜಿಲ್ಲಾಧಿಕಾರಿಗಳೊಂದಿಗೆ, ಸಂಜೆ ಹಿರಿಯ ಸಚಿವರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದರು.

ಮುಖ್ಯಮಂತ್ರಿ @BSYBJP ರವರು ಇಂದು – ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಚಿಕ್ಕಮಗಳೂರು – ಈ ಎಂಟು ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣದ ಕುರಿತಂತೆ ವೀಡಿಯೋ ಸಂವಾದ ನಡೆಸಿದರು. (1/2) #KarnatakaFightsCorona pic.twitter.com/7gAwjk0Za2

— CM of Karnataka (@CMofKarnataka) June 10, 2021

ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು ಇನ್ನು ಕೆಲ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದರು. ಈ ಸಲಹೆ ಆಧರಿಸಿ ಸಿಎಂ ಬಿಎಸ್‌ವೈ ರಾಜ್ಯದಲ್ಲಿ 2-3 ಹಂತಗಳಲ್ಲಿ ಅನ್ಲಾಕ್ ಮಾಡಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ @BSYBJP ರವರು ಇಂದು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್-19 ಪರಿಸ್ಥಿತಿ ಕುರಿತಂತೆ ಸಭೆ ನಡೆಸಿದರು.#KarnatakaFightsCorona pic.twitter.com/saxV6Fm5hf

— CM of Karnataka (@CMofKarnataka) June 10, 2021

ಸದ್ಯ ಕೊರೊನಾ ಸೋಂಕು ಹೆಚ್ಚಿರುವ ಹಿನ್ನಲೆ, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಹಾಸನ, ಬೆಳಗಾವಿ, ದಕ್ಷಿಣಕನ್ನಡ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಜೂನ್ 14 ರ ಬಳಿಕವೂ ಒಂದು ವಾರ ಲಾಕ್ಡೌನ್ ವಿಸ್ತರಣೆ ಮಾಡಲು ನಿರ್ಧರಿಸಿದ್ದು ಬಾಕಿ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಅನ್ಲಾಕ್‌ ಮಾಡಲು ತಿರ್ಮಾನಿಸಿದೆ.

ಅನ್ಲಾಕ್ ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟ, ಕಟ್ಟಡ ನಿರ್ಮಾಣ, ಮತ್ತು ಪೂರಕ ಸಾಮಾಗ್ರಿಗಳ ಮಾರಾಟ ಬಿಟ್ಟು ಉಳಿದ ಯಾವುದೇ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಿಲ್ಲ. ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಸಮಯ ವಿಸ್ತರಣೆ ಮಾಡಲಾಗಿದ್ದು, ಕಾರ್ಖಾನೆಗಳು 50% ಸಾಮರ್ಥ್ಯದೊಂದಿಗೆ, ಗಾರ್ಮೆಂಟ್‌ಗಳು 30% ಕಾರ್ಮಿಕರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ.

ಸರ್ಕಾರ ಕಚೇರಿಗಳು 50% ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು, ಬಾರ್‌ಗಳಲ್ಲಿ ಮಧ್ಯಾಹ್ನ 2 ವರೆಗೂ ಪಾರ್ಸಲ್ ಗೆ ಅವಕಾಶ ಕಲ್ಪಿಸಿದೆ. ಬೆಳಗ್ಗೆ 5 ರಿಂದ 10 ಗಂಟೆವರೆಗೂ ಪಾರ್ಕ್ ತೆರೆಯಲು ಗ್ರೀನ್ ಸಿಗ್ನಲ್ ನೀಡಲಾಗಿದೆ.

ಇನ್ನು ಖಾಸಗಿ ಕಚೇರಿಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿಲ್ಲ, ಸೋಂಕು ಹರಡುವ ಭೀತಿಯಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡದಿರಲು ಸರ್ಕಾರ ತಿರ್ಮಾನಿಸಿದೆ. ಲಾಕ್ಡೌನ್ ಆಗಿರುವ ಜಿಲ್ಲೆಗಳು ಸೇರಿ ಸರ್ಕಾರದ ಮುಂದಿನ ಆದೇಶದವರೆಗೂ ರಾಜ್ಯದಲ್ಲಿ ವಿಕೇಂಡ್ ಲಾಕ್ಡೌನ್ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಕಿ ಇಲ್ಲದೆ ಹೊಗೆಯಾಡದು, ಬಿಎಸ್‍ವೈ, ಹೈಕಮಾಂಡ್ ಎರಡೂ ದುರ್ಬಲ – ಸಿದ್ದರಾಮಯ್ಯ
Big News : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ – ಅರುಣ್ ಸಿಂಗ್

RECOMMENDED

B S Yediyurappa  : ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಸಂತಸ

B S Yediyurappa : ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಸಂತಸ

August 17, 2022
Bangalore Crime News : ಬಿಬಿಎಂಪಿ ಟಿಪ್ಪರ್ ಲಾರಿಗೆ ಸಿಲುಕಿ ಮಹಿಳೆ ಸಾವು

Crime News : ಟೆಕ್ಕಿಗೆ ಸಿಇಓನಿಂದ ಲೈಂಗಿಕ ದೌರ್ಜನ್ಯ, ಠಾಣೆ ಮೆಟ್ಟಿಲೇರಿದ ಟೆಕ್ಕಿ

August 17, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

B S Yediyurappa  : ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಸಂತಸ
Bangalore

B S Yediyurappa : ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಸಂತಸ

August 17, 2022
Bangalore Crime News : ಬಿಬಿಎಂಪಿ ಟಿಪ್ಪರ್ ಲಾರಿಗೆ ಸಿಲುಕಿ ಮಹಿಳೆ ಸಾವು
Crime

Crime News : ಟೆಕ್ಕಿಗೆ ಸಿಇಓನಿಂದ ಲೈಂಗಿಕ ದೌರ್ಜನ್ಯ, ಠಾಣೆ ಮೆಟ್ಟಿಲೇರಿದ ಟೆಕ್ಕಿ

August 17, 2022
Koutilya Release Date : “ಬಿಗ್ ಬಾಸ್” ಅರ್ಜುನ್ ರಮೇಶ್ ನಟನೆಯ “ಕೌಟಿಲ್ಯ”  ಆಗಸ್ಟ್ 26 ರಂದು ಬಿಡುಗಡೆ…!
Entertainment

Koutilya Release Date : “ಬಿಗ್ ಬಾಸ್” ಅರ್ಜುನ್ ರಮೇಶ್ ನಟನೆಯ “ಕೌಟಿಲ್ಯ” ಆಗಸ್ಟ್ 26 ರಂದು ಬಿಡುಗಡೆ…!

August 17, 2022
Club house : ಕ್ಲಬ್ ಹೌಸ್ ಗ್ರೂಪ್ ನ‌‌ ಡಿಪಿಗೆ ಪಾಕಿಸ್ತಾನ‌‌ ಧ್ವಜ ಹಾಕಿದ ಪ್ರಕರಣ – ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು
Crime

Club house : ಕ್ಲಬ್ ಹೌಸ್ ಗ್ರೂಪ್ ನ‌‌ ಡಿಪಿಗೆ ಪಾಕಿಸ್ತಾನ‌‌ ಧ್ವಜ ಹಾಕಿದ ಪ್ರಕರಣ – ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು

August 17, 2022
Mobile Robbery: ಪಬ್ಜಿಗೆ ಆಡೋಕೆ ಮೊಬೈಲ್ ಖರೀದಿಸಲು ರಾಬರಿ ಮಾಡಿದ್ದ ಪಬ್ಜಿ ಲವರ್ ಅಂದರ್
Crime

Mobile Robbery: ಪಬ್ಜಿಗೆ ಆಡೋಕೆ ಮೊಬೈಲ್ ಖರೀದಿಸಲು ರಾಬರಿ ಮಾಡಿದ್ದ ಪಬ್ಜಿ ಲವರ್ ಅಂದರ್

August 17, 2022
Bigboss kannada: ನಮ್ ಹುಡ್ಗನನ್ನು  ಆ ಹುಡ್ಗಿಯಿಂದ ದೂರ ಮಾಡ್ತೀನಿ…!
Entertainment

Bigboss kannada: ನಮ್ ಹುಡ್ಗನನ್ನು ಆ ಹುಡ್ಗಿಯಿಂದ ದೂರ ಮಾಡ್ತೀನಿ…!

August 17, 2022
ರಾಜಮೌಳಿ ಶಿಷ್ಯನ ಮಹ್ವಾಕಾಂಕ್ಷೆಯ ಚಿತ್ರ ‘1770’ಪ್ಯಾನ್ ಇಂಡಿಯಾ ಚಿತ್ರವಾಗಿ ಬರಲಿದೆ ಬಂಕಿಮಚಂದ್ರರ ಆನಂದಮಠ
Entertainment

ರಾಜಮೌಳಿ ಶಿಷ್ಯನ ಮಹ್ವಾಕಾಂಕ್ಷೆಯ ಚಿತ್ರ ‘1770’
ಪ್ಯಾನ್ ಇಂಡಿಯಾ ಚಿತ್ರವಾಗಿ ಬರಲಿದೆ ಬಂಕಿಮಚಂದ್ರರ ಆನಂದಮಠ

August 17, 2022
Bigboss kannada: ರೂಪೇಶ್ ಶೆಟ್ಟಿ, ಸಾನ್ಯಾ ಅವ್ರನ್ನು ಹೊಗಳೋಕೆ ಕಾರಣ ಇದೇನಾ..?
Entertainment

Bigboss kannada: ರೂಪೇಶ್ ಶೆಟ್ಟಿ, ಸಾನ್ಯಾ ಅವ್ರನ್ನು ಹೊಗಳೋಕೆ ಕಾರಣ ಇದೇನಾ..?

August 17, 2022
Next Post
ಚಿನ್ನದಲ್ಲಿ ಭಾರೀ ಇಳಿಕೆ

ಚಿನ್ನದಲ್ಲಿ ಭಾರೀ ಇಳಿಕೆ

ಇನ್ಮುಂದೆ ATMನಿಂದ ಹಣ ತೆಗೆದ್ರೂ ಬೀಳಲಿದೆ ಜೇಬಿಗೆ ಕತ್ತರಿ

ಇನ್ಮುಂದೆ ATMನಿಂದ ಹಣ ತೆಗೆದ್ರೂ ಬೀಳಲಿದೆ ಜೇಬಿಗೆ ಕತ್ತರಿ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist